ಕುಂಭ ಮೇಳ: ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗ ತೆರವುಗೊಳಿಸಿದ ಮುಸ್ಲಿಮರು 
ದೇಶ

ಕುಂಭ ಮೇಳ: ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗ ತೆರವುಗೊಳಿಸಿದ ಮುಸ್ಲಿಮರು

ಉತ್ತರಪ್ರದೇಶದ ಹಳೆಯ ಅಲಹಾಬಾದ್ನಲ್ಲಿ ಹಿಂದೂ-ಮುಸ್ಲಿಮರು ಏಕತೆಯನ್ನು ಸಾರಿದ್ದು, ಕುಂಭ ಮೇಳ ಹಿನ್ನೆಲೆಯಲ್ಲಿ ಸರ್ಕಾರದ ರಸ್ತೆ ಅಗಲೀಕರಣ ಯೋಜನೆಗೆ ಸಹಕಾರವನ್ನು ನೀಡಿದ್ದು, ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ...

ಅಲಹಾಬಾದ್: ಉತ್ತರಪ್ರದೇಶದ ಹಳೆಯ ಅಲಹಾಬಾದ್ನಲ್ಲಿ ಹಿಂದೂ-ಮುಸ್ಲಿಮರು ಏಕತೆಯನ್ನು ಸಾರಿದ್ದು, ಕುಂಭ ಮೇಳ ಹಿನ್ನೆಲೆಯಲ್ಲಿ ಸರ್ಕಾರದ ರಸ್ತೆ ಅಗಲೀಕರಣ ಯೋಜನೆಗೆ ಸಹಕಾರವನ್ನು ನೀಡಿದ್ದು, ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ. 
ಮುಂದಿನ ವರ್ಷ ಅಲಹಾಬಾದ್'ನ ಸಂಗಂನಗರಿಯಲ್ಲಿ ಕುಂಭಮೇಳ ನಡೆಯುತ್ತಿದ್ದು, ಇದಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳೆ ಸೂಚನೆ ನೀಡಿದ್ದಾರೆ. ಇದರ ಅಡಯಲ್ಲಿ ಅಲಹಾಬಾದ್'ನ ಕೆಲವು ರಸ್ತೆಗಳನ್ನು ಅಗಲೀಕರಣ ಮಾಡುವ ಕಾರ್ಯಗಳು ನಡೆಯುತ್ತಿದೆ. 
 ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳು ಆಯ್ಕೆ ಮಾಡಿಕೊಂಡಿರುವ ಪ್ರದೇಶಗಳು ಜನನಿಬಿಡ ಪ್ರದೇಶಗಳಾಗಿದ್ದು, ಅಗಲೀಕರಣ ಮಾಡಬೇಕಾಗಿರುವ ರಸ್ತೆಗಳಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳಲ್ಲಿ ಕೆಲ ಗೊಂದಲಗಳು ಮೂಡಿದ್ದವು. 
ಇದೀಗ ಗೊಂದಲಗಳಿಗೆ ಮುಸ್ಲಿಮರು ತೆರೆ ಎಳೆದಿದ್ದು, ಸ್ವಇಚ್ಛೆಯಿಂದಲೇ ರಸ್ತೆ ಅಗಲೀಕರಣಕ್ಕೆ ಸಹಾಯ ಮಾಡಿದ್ದಾರೆ. ಇದರಂತೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT