ದೇಶ

ತನ್ನ ಪ್ರೀತಿ ಸಾಬೀತುಪಡಿಸಲು ಗುಂಡಿಕ್ಕಿಕೊಂಡ ಬಿಜೆಪಿ ಮುಖಂಡ: ಹೃದಯ, ಅಂಗಾಂಗ ದಾನ

Vishwanath S
ಭೋಪಾಲ್: ಬಿಜೆಪಿ ಯುವ ದಳದ ನಾಯಕನೋರ್ವ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಯುವತಿಯ ಮನೆಯ ಮುಂದೆಯೇ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಆತನ ಹೃದಯ ಸಹಿತ ಅಂಗಾಂಗಗಳನ್ನು ಪೋಷಕರು ದಾನ ಮಾಡಿ ಸಹೃದಯ ಮೆರೆದಿದ್ದಾರೆ. 
30 ವರ್ಷದ ಅತುಲ್ ಲೋಖಂಡೆಗೆ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದರಿಂದ ಆತನ ಪೋಷಕರು ಅಂಗಾಂಗಗಳನ್ನು ದಾನ ಮಾಡಿದ್ದಾರೆ. 
ಪ್ರೀತಿ ವಿಚಾರವಾಗಿ ಲೋಖಂಡೆಗೆ ತಾನು ಪ್ರೀತಿಸುತ್ತಿದ್ದ 27 ವರ್ಷದ ಯುವತಿಯ ತಂದೆಯೊಂದಿಗೆ ಜಗಳವಾಡಿದ್ದ. ನಂತರ ಜುಲೈ 3ರಂದು ರಾತ್ರಿ ಆತ ಆಕೆಯ ಮನೆಯ ಮುಂದೆಯೇ ತನ್ನನ್ನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. 
ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆತನನ್ನು ಪರೀಕ್ಷಿಸಿದ ವೈದ್ಯರು ಅತುಲ್ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರಿಂದ ಪೋಷಕರು ಅಂಗಾಂಗಗಳ ದಾನಕ್ಕೆ ದೃಧ ಮನಸ್ಸು ಮಾಡಿದರು.
SCROLL FOR NEXT