ಆಗ್ರ: ಭಾರತೀಯ ಸೇನೆಗೆ ಸೇರಬೇಕೆಂಬ ಹೆಬ್ಬಯಕೆ, ಐದು ಬಾರಿ ಪ್ರಯತ್ನಿಸಿದರು ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ಫೇಸ್ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನ್ಯೂ ಆಗ್ರದ ಶಾಂತಿನಗರದ ನಿವಾಸಿ ಬಿಎಸ್ಸಿ ಪದವಿಧರನಾಗಿರುವ ಮುನ್ನಾ ಕುಮಾರ್ ನಿನ್ನೆ ಫೇಸ್ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಜಿಗದ ಸಂಗತಿಯೆಂದರೆ ಮುನ್ನಾ ಕುಮಾರ್ ಆತ್ಮಹತ್ಯೆಯ ಲೈವ್ ಅನ್ನು 2,750ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು ಯಾರೂ ಸಹ ಪೊಲೀಸರಿಗಾಗಲಿ ಅಥವಾ ಆತನ ಪೋಷಕರಿಗಾಗಲಿ ಮಾಹಿತಿ ನೀಡಲಿಲ್ಲ.
ಮುನ್ನಾ ಕುಮಾರ್ ನೇಣಿಗೆ ಶರಣಾಗಿದ್ದು ಆರು ಪುಟಗಳ ಡೆತ್ ನೋಟ್ ಅನ್ನು ಬರೆದಿಟ್ಟಿದ್ದಾನೆ. ಪತ್ರದಲ್ಲಿ ನಾನು ಐದು ಬಾರಿ ಭಾರತೀಯ ಸೇನೆಯ ಪರೀಕ್ಷೆ ತೆಗೆದುಕೊಂಡಿದ್ದರು ಆಯ್ಕೆಯಾಗಲಿಲ್ಲವೆಂಬ ನೋವು ನನ್ನಲಿದೆ ಎಂದು ಬರೆದಿಟ್ಟಿದ್ದಾನೆ.
ಆತ್ಮಹತ್ಯೆಗೆ ಶರಣಾಗಿರುವ ನನ್ನ ಅಣ್ಣನು ಭಗತ್ ಸಿಂಗ್ ಅವರ ಕಟ್ಟಾ ಅಭಿಮಾನಿ. ಅವರ ಸ್ಫೂರ್ತಿಯಿಂದ ಭಾರತೀಯ ಸೇನೆಗೆ ಸೇರಬೇಕೆಂಬ ಹೆಬ್ಬಯಕೆ ಹೊಂದಿದ್ದ. ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ನಮ್ಮ ಜೊತೆ ಸಂತೋಷವಾಗಿಯೇ ಊಟ ಮಾಡಿದ್ದ ಯಾರಿಗೂ ಆತ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾನೆ ಎಂಬ ಶಂಕೆ ಮೂಡಲಿಲ್ಲ ಎಂದು ಮುನ್ನಾ ಕುಮಾರ್ ಸಹೋದರ ಹೇಳಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos