ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 
ದೇಶ

ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯರತ್ತ ಬೆರಳು ತೋರಿದರೆ ಅಂತಹಾ ಬೆರಳನ್ನೇ ಕತ್ತರಿಸುತ್ತೇವೆ: ಹರಿಯಾಣ ಮುಖ್ಯಮಂತ್ರಿ

ಅತ್ಯಾಚಾರಕ್ಕೆ ಮಹಿಳೆಯರೇ ಕಾರಣವೆಂದು ಅವರತ್ತ ಬೆರಳು ತೋರಿಸುವವರ ಬೆರಳನ್ನು ಕತ್ತರಿಸಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ

ಚಂಡಿಘರ್: ಅತ್ಯಾಚಾರಕ್ಕೆ ಮಹಿಳೆಯರೇ ಕಾರಣವೆಂದು ಅವರತ್ತ ಬೆರಳು ತೋರಿಸುವವರ ಬೆರಳನ್ನು ಕತ್ತರಿಸಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ
ಹರಿಯಾಣದಲ್ಲಿ ಯಾರೇ ಆದರೂ ಅತ್ಯಾಚಾರ ಪ್ರಕರಣ ಅಥವಾ ಲೈಂಗಿಕ ಕಿರುಕುಳದಲ್ಲಿ ತೊಡಗಿಸಿಕೊಂಡಿದ್ದು ಆರೊಪಿ ಎಂದು ಕಂಡುಬಂದಲ್ಲಿ ಅಂತಹವರಿಗೆ ರಾಜ್ಯ ಸರ್ಕಾರಿ ಯೋಜನೆಗಳ ಸೌಲಭ್ಯ ದೊರಕಲಾರದೆಂದು ಅವರು ಹೇಳಿದ್ದಾರೆ.
"ನಮ್ಮ ಮಹಿಳೆಯರತ್ತ ಯಾರಾದರೂ ಬೆರಳು ತೋರಿದರೆ ಅವರ ಬೆರಳನ್ನು ಕತ್ತರಿಸುತ್ತೇವೆ.ಹಾಗೆಯೇ ನಾನು ಈ ಬಗೆಗೆ ವ್ಯವಸ್ಥೆ ಮಾಡುತ್ತೇನೆ" ಪಂಚಕುಲದಲ್ಲಿ ಏಕ್ ಔರ್ ಸುಧಾರ್ ಯೋಜನೆ ಉದ್ಘಾಟಿಸಿದ ಖಟ್ಟರ್ ಹೇಳಿದ್ದಾರೆ.
ಆದರೆ ಖಟ್ಟರ್ ಅವರ ಹೇಳಿಕೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಅವರು ಹೇಳಿಕೆ ಬಗೆಗೆ ಸ್ಪಷ್ಟನೆ ನಿಡಿದ್ದು ನಾವೇನೂ ಕ್ಷೌರಿಕನ ಆಡಳಿತ ನಡೆಸುವುದುದಾಗಿ ಹೇಳಿಲ್ಲ ಎಂದಿದ್ದಾರೆ.
"ನನ್ನ ಹೇಳಿಕೆಯ ಉದ್ದೇಶ ಕೇವಲ ಅಪರಾಧಿಗಳು/ಆರೋಪಿಗಳ ಶಿಕ್ಷೆಗಾಗಿ ಮಾತ್ರವೇ ಹೊರತು ಯಾವುದೇ ಅಸಂಸ್ಕೃತ ನಿಯಮ ಹೇರುವುದಿಲ್ಲ ಎಂದಿದ್ದಾರೆ.
ಆರೊಪಿಯು ತನ್ನೆಲ್ಲಾ ಆರೋಪದಿಂದ ಖುಲಾಸೆಯಾದರೆ ಅಂತಹವರು ಅನುಕೂಲಗಳನ್ನು ಪಎಯಲು ಅರ್ಹರಾಗುತ್ತಾರೆ ಎಂದು ಗುರುವಾರ ಖಟ್ಟರ್ ಹೇಳಿದ್ದರು.
ಅತ್ಯಾಚಾರ ಸಂಸ್ತ್ರಸ್ತೆಯು ಸರ್ಕಾರದಿಂದ ಒದಗಿಸಲಾದ ವಕೀಲರ ಹೊರತಾಗಿ ಬೇರೆ ವಕೀಲರನ್ನು ನೇಮಿಸಿಕೊಳ್ಳ ಬಯಸಿದರೆ ಅಂತಹಾ ಮಹಿಳೆಗೆ ಸರ್ಕಾರ 22,000 ರೂ. ಆರ್ಥಿಕ ನೆರವು  ನಿಡಲಿದೆ ಮುಂದಿನ ಸ್ವಾತಂತ್ರ ದಿನಾಚರಣೆ ಅಥವಾ ರಕ್ಷಾ ಬಂಧನ ದಿನದಂದು ಮಹಿಳಾ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ಸಮಗ್ರ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT