ಗೋಲ್ಡನ್ ಟೆಂಪಲ್ 
ದೇಶ

160 ಕೆಜಿ ಗೂ ಹೆಚ್ಚು ಚಿನ್ನ ಲೇಪಿತದಿಂದ ಹೊಳೆಯುತ್ತಿದೆ ' ಗೋಲ್ಡನ್ ಟೆಂಪಲ್ '

ಸಿಖ್ ರ ಪವಿತ್ರ ಪುಣ್ಯ ಕ್ಷೇತ್ರ ಗೋಲ್ಡನ್ ಟೆಂಪಲ್ ನ ನಾಲ್ಕು ಪ್ರವೇಶ ದ್ವಾರಗಳು 50 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಬಂಗಾರದಿಂದ ಲೇಪಿತಗೊಂಡಿದ್ದು, ಮಿರಮಿರನೆ ಹೊಳೆಯುತ್ತಿವೆ.

ಅಮೃತಸರ: ಸಿಖ್ ರ ಪವಿತ್ರ ಪುಣ್ಯ ಕ್ಷೇತ್ರ ಗೋಲ್ಡನ್ ಟೆಂಪಲ್  ನ ನಾಲ್ಕು ಪ್ರವೇಶ ದ್ವಾರಗಳು  50 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಬಂಗಾರದಿಂದ ಲೇಪಿತಗೊಂಡಿದ್ದು, ಮಿರಮಿರನೆ ಹೊಳೆಯುತ್ತಿದೆ.

ನಾಲ್ಕು ಪ್ರವೇಶದ್ವಾರಗಳ ಜೊತೆಗೆ ಪವಿತ್ರ  ಸರೋವರದ ಮಧ್ಯಭಾಗದಲ್ಲಿನ ಹರ್ಮಂದರ್ ಸಾಹೀಬ್ ಮಂದಿರ  ,  ಅಕಲ್ ತಖ್ತ್ ಗುಮ್ಮಟಗಳು, ಹಾಗೂ ಗರ್ಭಗುಡಿ ಪ್ರವೇಶದ್ವಾರವನ್ನು ಚಿನ್ನದಿಂದ ಲೇಪಿತಗೊಳಿಸಲಾಗಿದೆ.

ಗೋಲ್ಡನ್ ಟೆಂಪಲ್ ನ ಪ್ರವೇಶ ದ್ವಾರಗಳು ಎಲ್ಲರಿಗೂ ಮುಕ್ತಗೊಂಡಿರುತ್ತವೆ ಎಂಬ ಸಂಕೇತದ ಹಿನ್ನೆಲೆಯಲ್ಲಿ  ನಾಲ್ಕು ಪ್ರವೇಶ ದ್ವಾರಗಳನ್ನು ಚಿನ್ನದಿಂದ ಲೇಪಿತಗೊಳಿಸಲು ನಿರ್ಧರಿಸಲಾಯಿತು ಎಂದು ಶಿರೋಮಣಿ ಗುರುದ್ವಾರ ಪರಬಂದಕ್ ಕಮಿಟಿಯ ಹೆ್ಚ್ಟುವರಿ ಕಾರ್ಯದರ್ಶಿ ದಿಲ್ಜಿತ್ ಸಿಂಗ್ ಬೇಡಿ ತಿಳಿಸಿದ್ದಾರೆ.

ಸಿಖ್ ಆಡಳಿತಗಾರ ಮಹಾರಾಜ ರಂಜಿತ್ ಸಿಂಗ್ 192 ವರ್ಷಗಳ ಹಿಂದೆ 16.39 ಲಕ್ಷ ವೆಚ್ಚದಲ್ಲಿ (ಸೊನ್ ಡಿ ಸೇವಾ) ಚಿನ್ನದಿಂದ ಸೇವೆ ಮಾಡಿದ್ದರು. ಮೊಹಮ್ಮದ್ ಖಾನ್ ಮೊದಲ ಚಿನ್ನ ಲೇಪಿತಗೊಳಿಸಿದ ಮೊದಲ ಕುಶಲಕರ್ಮಿ, ರಂಜಿತ್ ಸಿಂಗ್ ನಂತರ ಆತನ ರಾಣಿಯರು , ಮತ್ತಿತರರು ಈ ಸೇವೆಗಾಗಿ ಕೊಡುಗೆ ನೀಡುತ್ತಾ ಬಂದಿದ್ದರು. ಆ ಅವಧಿಯಲ್ಲಿ ಸುಮಾರು 64. 11 ಲಕ್ಷ ವೆಚ್ಚ ಮಾಡಲಾಗಿತ್ತು ಎಂದು ತ್ವಾರಿಖ್ ಶ್ರೀ ಅಮೃತಸರ ಪುಸ್ತಕದಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT