ನೀಲ್ ಗಾಯ್ 
ದೇಶ

ಶತ್ರುವಿನಿಂದಲೇ ಉಳಿಯಿತು 18 ಜನರ ಜೀವ, ಗುಜರಾತ್‍ನಲ್ಲೊಂದು ವಿಚಿತ್ರ ಘಟನೆ!

ನೀಲ್ ಗಾಯ್(ನೀಲಿ ಜಿಂಕೆ)ಗಳೆಂದರೆ ಗುಜರಾತ್ ರೈತರ ಪಾಲಿಗೆ ಶತ್ರುಗಳಿದ್ದಂತೆ. ನೀಲ್ ಗಾಯ್ ಗಳು ತಂಡೋಪತಂಡವಾಗಿ ಬಂದು ಬೆಳೆದು ನಿಂತ...

ಅಹಮದಾಬಾದ್: ನೀಲ್ ಗಾಯ್(ನೀಲಿ ಜಿಂಕೆ)ಗಳೆಂದರೆ ಗುಜರಾತ್ ರೈತರ ಪಾಲಿಗೆ ಶತ್ರುಗಳಿದ್ದಂತೆ. ನೀಲ್ ಗಾಯ್ ಗಳು ತಂಡೋಪತಂಡವಾಗಿ ಬಂದು ಬೆಳೆದು ನಿಂತ ಪೈರುಗಳನ್ನು ತಿಂದು ಹಾಕುತ್ತಿದ್ದವು ಇದು ರೈತರ ಚಿಂತೆಗೆ ಕಾರಣವಾಗಿತ್ತು.
ಇಂತಹ ನೀಲ್ ಗಾಯ್ ಗಳು ಸುಮಾರು 18 ಜನರ ಜೀವ ಉಳಿಯಲು ಕಾರಣವಾಗಿವೆ. ಹೌದು ಪ್ರವಾಹಕ್ಕೆ ಸಿಲುಕಬೇಕಿದ್ದ 18 ಜನರು ನೀಲ್ ಗಾಯ್ ಗಳ ಸೂಚನೆಯಿಂದ ಬದುಕುಳಿದಿದ್ದಾರೆ. 
ಮೂವರು ಅರಣ್ಯಾಧಿಕಾರಿಗಳು, ಮೂವರು ಕಾವಲುಗಾರರು ಹಾಗೂ 12 ಜನ ಕಾರ್ಮಿಕರು ಹಂಡಾ ವಿದಿ ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 3 ಗಂಟೆ ವೇಳೆ ಅಲ್ಲೇ ಪಕ್ಕದಲ್ಲಿ ಮೇಯುತ್ತಿದ್ದ ನೀಲ್ ಗಾಯ್ ಗಳು ವಿಚಿತ್ರವಾಗಿ ವರ್ತಿಸಿವೆ. ಅಲ್ಲದೆ ಅವುಗಳು ಅಲ್ಲಿಂದ ಕಾಲು ಕಿತ್ತಿವೆ. ಇದನ್ನು ಕಂಡು ಗಲಿಬಿಲಿಗೊಂಡ 18 ಮಂದಿ ಇದು ಅಪಾಯ ಮುನ್ಸೂಚನೆ ಎಂದು ಭಾವಿಸಿ ಕೆಲಸವನ್ನು ಸುರಕ್ಷಿತ ಜಾಗಕ್ಕೆ ತೆರಳಿದ್ದಾರೆ. 
ನಂತರ ಸುಮಾರು 3 ಗಂಟೆಯಲ್ಲೇ ನದಿಗೆ ಪ್ರವಾಹ ಬಂದು ಹುಲ್ಲುಗಾವಲಿನಲ್ಲಿ 6 ರಿಂದ 7 ಅಡಿ ನೀರು ತುಂಬಿತು. ಅಂತು ನೀಲ್ ಗಾಯ್ ಗಳ ವಿಚಿತ್ರ ವರ್ತನೆ 18 ಜನರ ಜೀವ ಉಳಿಯಲು ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT