ಸಾಂದರ್ಭಿಕ ಚಿತ್ರ 
ದೇಶ

ಬ್ಯಾಂಕುಗಳ ಶುಲ್ಕಗಳು ಸಮಾಂಜಸ, ಏಕರೂಪವಾಗಿರಲಿ - ಛತ್ತೀಸ್ ಗಡ ಹೈಕೋರ್ಟ್

ಬ್ಯಾಂಕುಗಳು ವಿವಿಧ ವ್ಯವಹಾರ, ಮತ್ತಿತರ ಸೇವೆಗಳಿಗೆ ಗ್ರಾಹಕರಿಂದ ಪಡೆಯುವ ಶುಲ್ಕಗಳು ಸಮಾಂಜಸ ಹಾಗೂ ಏಕರೂಪತೆಯಿಂದ ಕೂಡಿರಲಿ ಎಂದು ಛತ್ತೀಸ್ ಗಡದ ಹೈಕೋರ್ಟ್ ಇಂದು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ರಾಯಪುರ: ಬ್ಯಾಂಕುಗಳು ವಿವಿಧ  ವ್ಯವಹಾರ, ಮತ್ತಿತರ ಸೇವೆಗಳಿಗೆ  ಗ್ರಾಹಕರಿಂದ ಪಡೆಯುವ  ಶುಲ್ಕಗಳು ಸಮಾಂಜಸ ಹಾಗೂ ಏಕರೂಪತೆಯಿಂದ ಕೂಡಿರಲಿ ಎಂದು  ಛತ್ತೀಸ್ ಗಡದ ಹೈಕೋರ್ಟ್  ಇಂದು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ವಕೀಲ ಸಲೀಂ ಕಾಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ  ಅಜಯ್ ಕುಮಾರ್ ತ್ರಿಪಾಠಿ ಮತ್ತು ನ್ಯಾಯಧೀಶ ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ , ಈ ಆದೇಶ ನೀಡಿದೆ.

ಬ್ಯಾಂಕುಗಳ ಖಾತೆಯಲ್ಲಿ  ಕನಿಷ್ಠ  ತಿಂಗಳ ಸರಾಸರಿ ಸಮತೋಲನ ಮತ್ತು ವ್ಯವಹಾರ ದರ ಸಂಬಂಧ  ವಿವಿಧ ಬ್ಯಾಂಕುಗಳು ಹೊರಡಿಸಿದ ಆದೇಶದ ವಿರುದ್ಧ ಕಾಜಿ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಕನಿಷ್ಠ  ತಿಂಗಳ ಸರಾಸರಿ ಸಮತೋಲನ ಬಗ್ಗೆ  ನ್ಯಾಯಾಲಯ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ವಿವಿಧ ಬ್ಯಾಂಕುಗಳು ಪಡೆಯುತ್ತಿದ್ದ  ಶುಲ್ಕಗಳು ತಾರತಾಮ್ಯದಿಂದ ಕೂಡಿದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಬ್ಯಾಂಕುಗಳ ಗ್ರಾಹಕರಿಂದ ಪಡೆಯುವ  ಶುಲ್ಕಗಳು ಸಮಾಂಜಸ ಹಾಗೂ ಏಕರೂಪತೆಯಿಂದ ಕೂಡಿರಲಿ ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದು ಕಾಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT