ಪ್ರಧಾನಿ ನರೇಂದ್ರ ಮೋದಿ 
ದೇಶ

ಭಾಗಿದಾರ್ ಟೀಕೆ ಅಲ್ಲ, ಅಭಿನಂದನೆ - ಪ್ರಧಾನಿ ಮೋದಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚೌಕಿದಾರ್, ಭಾಗೀದಾರ್ ಟೀಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಇದು ಟೀಕೆಯಲ್ಲಾ ಅಭಿನಂದನೆ ಅಂತಾ ಭಾವಿಸಿರುವುದಾಗಿ ಅವರು ಹೇಳಿದ್ದಾರೆ.

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚೌಕಿದಾರ್, ಭಾಗೀದಾರ್  ಟೀಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಇದು ಟೀಕೆಯಲ್ಲಾ ಅಭಿನಂದನೆ ಅಂತಾ ಭಾವಿಸಿರುವುದಾಗಿ ಅವರು ಹೇಳಿದ್ದಾರೆ.

ಕೆಲ ದಿನಗಳಲ್ಲಿ ನನ್ನನ್ನು ದೇಶದ ಕಾವಲುಗಾರ ಅಲ್ಲ ಭಾಗಿದಾರ್ ಅಂತಾ ಪ್ರತಿಪಕ್ಷಗಳು ಕರೆಯುತ್ತಿವೆ  ಆದರೆ, ನಾನು ಬಡವರ ಸಂಕಷ್ಟಗಳಲ್ಲಿ ಭಾಗಿದ್ದಾರ ನಾಗಿದ್ದೇನೆ ಎಂಬುದಕ್ಕೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದುಕೊಂಡಿದ್ದೇನೆ  ಎಂದು ಅವರು ಹೇಳಿದ್ದಾರೆ.

ಈ ಆರೋಪವನ್ನು ಅಭಿನಂದನೆ ಅಂದುಕೊಂಡಿದ್ದೇನೆ.  ಬಡವರು, ಶ್ರಮಜೀವಿ ಕಾರ್ಮಿಕರು, ಬೆಳೆನಷ್ಟ ಮಾಡಿಕೊಂಡಿರುವ  ಬಡ ರೈತರು, ದುಃಖತಪ್ತ ತಾಯಿಯ ಹಾಗೂ ದೇಶ ಸೇವೆಗಾಗಿ ತಮ್ಮ ಪ್ರಾಣ ಮುಡುಪಾಗಿಟ್ಟಿರುವ  ಯೋಧರ ಸಂಕಷ್ಟಗಳ ನಿವಾರಣೆಯಲ್ಲಿ  ಭಾಗಿಯಾದ ಬಗ್ಗೆ ನನ್ನಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.

ನಗರಾಭಿವೃದ್ದಿಗೆ ಸಂಬಂಧಿಸಿದ  ಮೂರು ಸರಕಾರದ ಉಪಕ್ರಮಗಳ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ  ಮಾತನಾಡಿದ ಮೋದಿ , 2022ರೊಳಗೆ ಸೂರು ಇಲ್ಲದ ಎಲ್ಲ ಜನರಿಗೂ ಸರ್ಕಾರ ಸೂರು ಕಲ್ಪಿಸಲಿದೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT