ಹಿಂದೂ ಹೀ ಆಗೇ ಆಗ್ರಾ ಘಟಕದ ಮುಖ್ಯಸ್ಥರಾಗಿರುವ ಗೋವಿಂದ ಪರಾಶರ್ 
ದೇಶ

ನಟ ಸಲ್ಮಾನ್ ಖಾನ್ ಥಳಿಸಿದರೆ ರೂ.2 ಲಕ್ಷ; 'ಹಿಂದೂ ಹೀ ಆಗೇ' ಸಂಘಟನೆಯಿಂದ ಬಹುಮಾನ ಘೋಷಣೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಥಳಸಿದರೆ ರೂ.2 ಲಕ್ಷ ಇನಾಮು ನೀಡುವುದಾಗಿ ಹಿಂದೂ ಹೀ ಆಗೇ ಸಂಘಟನೆ ಶುಕ್ರವಾರ ಘೋಷಣೆ ಮಾಡಿದೆ...

ಆಗ್ರಾ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಥಳಸಿದರೆ ರೂ.2 ಲಕ್ಷ ಇನಾಮು ನೀಡುವುದಾಗಿ ಹಿಂದೂ ಹೀ ಆಗೇ ಸಂಘಟನೆ ಶುಕ್ರವಾರ ಘೋಷಣೆ ಮಾಡಿದೆ. 
ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ನೂತನ ಸಂಘಟನೆಯಾಗಿರುವ ಹಿಂದೂ ಹೀ ಆಗೇ ಆಗ್ರಾ ಘಟಕದ ಮುಖ್ಯಸ್ಥರಾಗಿರುವ ಗೋವಿಂದ ಪರಾಶರ್ ಅವರು ಈ ಘೋಷಣೆಯನ್ನು ಮಾಡಿದ್ದಾರೆ. 
ನಟ ಸಲ್ಮಾನ್ ಅವರು ಸಿನಿಮಾ ನಿರ್ಮಾಣ ಸಂಸ್ಥೆ ಲವ್'ರಾತ್ರಿ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರ ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 
ಚಿತ್ರದ ಹೆಸರಿಗೆ ಇದೀಗ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದು, ಚಿತ್ರಕ್ಕೆ ಲವ್'ರಾತ್ರಿ ಎಂಬ ಹೆಸರಿಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ, ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಹಿಂದೂ ಹೀ ಆಗೇ ಸಂಘಟನೆ ಆಗ್ರಹಿಸುತ್ತಿದೆ. 
ಸಂಘಟನೆಯ ಕಾರ್ಯಕರ್ತರು ಭಗವಾನ್ ಟಾಕೀಸ್ ಬಳಿ ಸಲ್ಮಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಲ್ಮಾನ್ ಅವರನ್ನು ಸಾರ್ವಜನಿಕವಾಗಿ ಥಳಿಸಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 
ಸಲ್ಮಾನ್ ಖಾನ್ ಅವರಿಗೆ ಯಾರು ಹೊಡೆಯುತ್ತಾರೋ ಅವರಿಗೆ ರೂ.5 ಲಕ್ಷ ಹಾಗೂ ಚಿತ್ರದ ಸೆಟ್'ನ್ನು ಧ್ವಂಸಗೊಳಿಸಿದವರಿಗೆ ರೂ.2 ಲಕ್ಷ ಬಹುಮಾನ ನೀಡುವುದಾಗಿ ಪರಾಶರ್ ಅವರು ಘೋಷಣೆ ಮಾಡಿದ್ದಾರೆ. 
ಇಲ್ಲದೆ, ಚಿತ್ರ ಬಿಡುಗಡೆ ಮಾಡುವ ಚಿತ್ರಮಂದಿರವನ್ನು ಧ್ವಂಸಗೊಳಿಸುವುದಾಗಿಯೂ ಇದೇ ವೇಳೆ ಬೆದರಿಕೆ ಹಾಗಿದ್ದಾರೆ. ಚಿತ್ರಮಂದಿರ ಹಾಳಾದರೆ ಅದಕ್ಕೆ ಮಾಲೀಕರೇ ಕಾರಣರಾಗುತ್ತಾರೆಂದು ಪರಾಶರ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT