ದೆಹಲಿಯ ಚಿತ್ರ 
ದೇಶ

ದೆಹಲಿ ಸುತ್ತಮುತ್ತ ಧೂಳು ಮಿಶ್ರಿತ ಬಿರುಗಾಳಿ: ಕಗತ್ತಲು

ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ ಕಂಡುಬಂದು ಧಾರಾಕಾರ ಮಳೆ ಸುರಿಯಿತು.

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ  ಕಂಡುಬಂದು ಧಾರಾಕಾರ ಮಳೆ ಸುರಿಯಿತು.
ಎರಡು ಗಂಟೆ ಮುಂಚಿತವಾಗಿಯೇ ಸಂಜೆ 5 ಗಂಟೆ ವೇಳೆಗೆ ಕತ್ತಲು ಆವರಿಸಿತು . ಭಾರಿ ಮಳೆಯಿಂದಾಗಿ  ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು. ಬಿರುಗಾಳಿ ಸಹಿತ ಗಾಳಿ ಮಳೆಯಿಂದಾಗಿ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿರುವ ಘಟನೆ ವರದಿಯಾಗಿದೆ.
ಹರಿಯಾಣದ ಗುರುಗ್ರಾಮ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇಂತಹದೇ ವಾತವಾರಣ ವರದಿಯಾಗಿದೆ.ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ.
ಇಂದು  ಬಿರುಗಾಳಿ ಸಹಿತ  ಅಲ್ಪಪ್ರಮಾಣದ ಮಳೆಯಾಗಲಿದೆ ಎಂದು ನಿನ್ನೆಯೇ ಹವಾಮಾನ ಇಲಾಖೆ ಹೇಳಿಕೆ ನೀಡಿತ್ತು.  ಬೆಳಿಗ್ಗೆ ಸಾಮಾನ್ಯ ತಾಪಮಾನ 30 ಡಿಗ್ರಿ ಸೆಲ್ಸಿಯಸ್ಸ್  ದಾಖಲಾಗಿತ್ತು. ಸಂಜೆಯಾಗುತ್ತಿದ್ದಂತೆ ಶೇ.71 ರಷ್ಟು ಶೀತ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT