ದೆಹಲಿಯ ಚಿತ್ರ 
ದೇಶ

ದೆಹಲಿ ಸುತ್ತಮುತ್ತ ಧೂಳು ಮಿಶ್ರಿತ ಬಿರುಗಾಳಿ: ಕಗತ್ತಲು

ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ ಕಂಡುಬಂದು ಧಾರಾಕಾರ ಮಳೆ ಸುರಿಯಿತು.

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ  ಕಂಡುಬಂದು ಧಾರಾಕಾರ ಮಳೆ ಸುರಿಯಿತು.
ಎರಡು ಗಂಟೆ ಮುಂಚಿತವಾಗಿಯೇ ಸಂಜೆ 5 ಗಂಟೆ ವೇಳೆಗೆ ಕತ್ತಲು ಆವರಿಸಿತು . ಭಾರಿ ಮಳೆಯಿಂದಾಗಿ  ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು. ಬಿರುಗಾಳಿ ಸಹಿತ ಗಾಳಿ ಮಳೆಯಿಂದಾಗಿ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿರುವ ಘಟನೆ ವರದಿಯಾಗಿದೆ.
ಹರಿಯಾಣದ ಗುರುಗ್ರಾಮ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇಂತಹದೇ ವಾತವಾರಣ ವರದಿಯಾಗಿದೆ.ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ.
ಇಂದು  ಬಿರುಗಾಳಿ ಸಹಿತ  ಅಲ್ಪಪ್ರಮಾಣದ ಮಳೆಯಾಗಲಿದೆ ಎಂದು ನಿನ್ನೆಯೇ ಹವಾಮಾನ ಇಲಾಖೆ ಹೇಳಿಕೆ ನೀಡಿತ್ತು.  ಬೆಳಿಗ್ಗೆ ಸಾಮಾನ್ಯ ತಾಪಮಾನ 30 ಡಿಗ್ರಿ ಸೆಲ್ಸಿಯಸ್ಸ್  ದಾಖಲಾಗಿತ್ತು. ಸಂಜೆಯಾಗುತ್ತಿದ್ದಂತೆ ಶೇ.71 ರಷ್ಟು ಶೀತ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT