ನವದೆಹಲಿ: ಶುದ್ದ ಕುಡಿಯುವ ನೀರು ಸಿಗದೆ ಪ್ರತಿವರ್ಷ 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 60 ಕೋಟಿ ಜನರು ನೀರಿನ ಬವಣೆಯಿಂದ ಬಳಲುತ್ತಿದ್ದು, ದೇಶ ಕೆಟ್ಟ ನೀರಿನ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ಹೆಸರಿನಲ್ಲಿ ವರದಿಯನ್ನು ಇಂದು ಬಿಡುಗಡೆ ಮಾಡಿದ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ,ಬಿಕ್ಕಟ್ಟು ಮಾತ್ರ ಕೆಟ್ಟದಾಗಿ ಹೋಗಲಿದೆ ಎಂದು ಹೇಳಿದರು.
"2030 ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆ ಎರಡು ಬಾರಿ ಪೂರೈಕೆ ಮಾಡುವಷ್ಟು ಲಭ್ಯವಿರುವುದಾಗಿ ಊಹಿಸಲಾಗಿದ್ದು, ನೂರಾರು ದಶಲಕ್ಷ ಜನರಿಗೆ ತೀವ್ರವಾದ ನೀರಿನ ಕೊರತೆ ಎದುರಾಗಲಿದೆ. ಜಿಡಿಪಿಯಲ್ಲಿ ಶೇ.6 ರಷ್ಟ ಕೊರತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ವತಂತ್ರ ಏಜೆನ್ಸಿಗಳ ಮಾಹಿತಿಯಂತೆ ಶೇ. 70 ರಷ್ಟು ನೀರು ಕಲುಷಿತವಾಗಿದ್ದು, ನೀರಿನ ಗುಣಮಟ್ಟದ ಸೂಚ್ಯಂಕದಲ್ಲಿನ 122 ರಾಷ್ಟ್ರಗಳ ಪೈಕಿ ಭಾರತ 120 ನೇ ಸ್ಥಾನದಲ್ಲಿದೆ .
ಪ್ರಸಕ್ತ, 600 ಮಿಲಿಯನ್ ಭಾರತೀಯರು ತೀವ್ರ ನೀರಿನ ಬವಣೆ ಎದುರಿಸುತ್ತಿದ್ದಾರೆ . ಅಲ್ಲದೇ ಸುರಕ್ಷಿತವಾಗಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಸಾವನ್ನಪ್ಪುತ್ತಾರೆ" ಎಂದು ನೀತಿ ಆಯೋಗದ ವರದಿಯಲ್ಲಿ ಹೇಳಲಾಗಿದ್ದು. ನೀರಿನ ಸಂಪನ್ಮೂಲಗಳು ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಬೇಕಾಗದ ಅಗತ್ಯವಿದೆ ಎಂದು ಒತ್ತಿ ಹೇಳಿದೆ.