ಛತ್ತೀಸ್ ಘರ್: ಭದ್ರತಾ ಪಡೆ ಎನ್ ಕೌಟರ್ ಗೆ ಮೂವರು ನಕ್ಸಲರ ಬಲಿ 
ದೇಶ

ಛತ್ತೀಸ್ ಘರ್: ಭದ್ರತಾ ಪಡೆ ಎನ್ ಕೌಟರ್ ಗೆ ಮೂವರು ನಕ್ಸಲರ ಬಲಿ

ಭದ್ರತಾ ಪಡೆ ಜತೆಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸರಲ್ರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಎನ್ ಕೌಟರ್ ನಡೆದಿದೆ ಎಂದು ಅಧಿಕಾರಿಗ್ಳು ಹೇಳಿದರು.

ರಾಯ್ ಪುರ(ಛತ್ತೀಸ್ ಘರ್): ಭದ್ರತಾ ಪಡೆ ಜತೆಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸರಲ್ರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಛತ್ತೀಸ್ ಘರ್ ಸುಕ್ಮಾ ಜಿಲ್ಲೆಯಲ್ಲಿ ಈ ಎನ್ ಕೌಟರ್ ನಡೆದಿದೆ ಎಂದು ಅಧಿಕಾರಿಗ್ಳು ಹೇಳಿದರು.
ಸುಮಾರು 10 ಗಂಟೆಗೆ ಚಿಂತಾಗುಫ ಪೊಲೀಸ್ ಠಾಣೆ  ವ್ಯಾಪ್ತಿಯ ಗಟ್ಟಾಪಾದ್ ಹಾಗು ತೋಕನ್ಪಲ್ಲಿ ಗ್ರಾಮಗಳ ನಡುವೆ  ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂದು  ಸುಕ್ಮಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.
ಗುರುವಾರ ರಾತ್ರಿ ರಾಜಧಾನಿ ರಾಯ್ ಪುರದಿಂದ  500 ಕಿ.ಮೀ ದೂರದಲ್ಲಿರುವ ಚಿಂತಾಗುಫ  ಅರಣ್ಯದಲ್ಲಿ ಜಿಲ್ಲಾ ರಕ್ಷಣಾ ಪಡೆ ಹಾಗೂ  ವಿಶೇಷ ಟಾಸ್ಕ್ ಫೋರ್ಸ್) ಜಂಟಿ ತಂಡ ನಕ್ಸಲ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು ಎಂದು ಅವರು ಹೇಳಿದ್ದಾರೆ.
ಭದ್ರತಾ ಪಡೆಗಳು ಗಟ್ಟಾಪಾದ್ ಹಾಗು ತೋಕನ್ಪಲ್ಲಿ ಗ್ರಾಮದ ಅರಣ್ಯಕ್ಕೆ ಬಂಡಾಗ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಭದ್ರತಾ ಪಡೆಗಳೂ ಸಹ ದಾಳಿ ಮಾಡಿದ್ದು ನಕ್ಸಲರು ಕಾಡಿನಲ್ಲಿ ನಾಪತ್ತೆಯಾದರು.
ಈ ಸಂದರ್ಭ ಭದ್ರತಾ ಪಡೆಗಳು ನಡೆಸಿದ ಶೋಧದಲ್ಲಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ., 315 ಬೋರ್ ರೈಫಲ್ಸ್ ಸೇರಿ ನಾಲ್ಕು ಶಾಸ್ತ್ರಗಳು ಪತ್ತೆಯಾಗಿದೆ. ಹತ್ಯೆಯಾದ ನಕ್ಸಲರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT