ಮೈತ್ರಿ ತೊರೆಯಲು ಬಿಜೆಪಿ ನೀಡಿರುವ ಕಾರಣಗಳ ಬಗ್ಗೆ ಹೆಮ್ಮೆಇದೆ: ಪಿಡಿಪಿ 
ದೇಶ

ಮೈತ್ರಿ ತೊರೆಯಲು ಬಿಜೆಪಿ ನೀಡಿರುವ ಕಾರಣಗಳ ಬಗ್ಗೆ ಹೆಮ್ಮೆಇದೆ: ಪಿಡಿಪಿ

ಕಾಶ್ಮೀರ ಜನತೆಯ ಹಿತಾಸಕ್ತಿಗಳನ್ನು ಕಾಪಾಡಲು ಸಾವಿರ ಬಾರಿ ಸರ್ಕಾರ, ಅಧಿಕಾರ ತ್ಯಾಗ ಮಾಡುವುದಕ್ಕೂ ಸಿದ್ಧವಿರುವುದಾಗಿ ಪಿಡಿಪಿ ಪಕ್ಷ ಹೇಳಿದೆ.

ಶ್ರೀನಗರ: ಕಾಶ್ಮೀರ ಜನತೆಯ ಹಿತಾಸಕ್ತಿಗಳನ್ನು ಕಾಪಾಡಲು ಸಾವಿರ ಬಾರಿ ಸರ್ಕಾರ, ಅಧಿಕಾರ ತ್ಯಾಗ ಮಾಡುವುದಕ್ಕೂ ಸಿದ್ಧವಿರುವುದಾಗಿ ಪಿಡಿಪಿ ಪಕ್ಷ ಹೇಳಿದೆ. 
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಪತನವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಪಿ ಮುಖಂಡ ಎಂಎಲ್ ಸಿ ಮೊಹಮ್ಮದ್ ಖುರ್ಷಿದ್ ಆಲಂ, ಬಿಜೆಪಿ ಪಿಡಿಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುವುದಕ್ಕೆ ಯಾವೆಲ್ಲಾ ಕಾರಣಗಳನ್ನು ನೀಡಿದೆಯೋ ಅವೆಲ್ಲಾ ಕಾರಣಗಳ ಬಗ್ಗೆ ಪಿಡಿಪಿ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದೆ.
ಪಾಕಿಸ್ತಾನ ಹಾಗೂ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದು, ಸೇನೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು, ಏಕಪಕ್ಷೀಯವಾಗಿ ಕದನವಿರಾಮ ಹಾಕುವುದು ಪಿಡಿಪಿಯ ಬೇಡಿಕೆಗಳಾಗಿದ್ದವು. ಈ ಬೇಡಿಕೆಗಳ ಬಗ್ಗೆ ಪಿಡಿಪಿಗೆ ಹೆಮ್ಮೆ ಇದೆ, ಬಿಜೆಪಿ ಮೈತ್ರಿ ತೊರೆಯಲು ನೀಡಿರುವ ಕಾರಣವೂ ಸಹ ಇದೇ ಬೇಡಿಕೆಗಳಾಗಿದೆ.  ಆದರೆ ಕಾಶ್ಮೀರದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ಎಷ್ಟು ಬಾರಿ ಬೇಕಾದರೂ ಅಧಿಕಾರ ತ್ಯಾಗ ಮಾಡುವುದಕ್ಕೆ ನಾವು ಸಿದ್ಧವಿದ್ದೇವೆ ಎಂದು ಪಿಡಿಪಿ ಹೇಳಿದೆ.
ಯಾವುದೇ ರೀತಿಯ ಸವಾಲು ಎದುರಾದರೂ ನಮ್ಮ ಸಿದ್ಧಂತದಲ್ಲಿ ಮಾತ್ರ ರಾಜಿಮಾಡಿಕೊಳ್ಳುವುದಿಲ್ಲ ಎಂದು ಪಿಡಿಪಿ ನಾಯಕ ಮೊಹಮ್ಮದ್ ಖುರ್ಷಿದ್ ಆಲಂ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT