ದೇಶ

ಪ್ರಧಾನಿ ಮೋದಿ ನಂತರ ಅತ್ಯಂತ ಜನಪ್ರಿಯ ನಾಯಕ ನಾನೇ: ಸುಬ್ರಮಣಿಯನ್ ಸ್ವಾಮಿ

Vishwanath S
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಂತರ ದೇಶದ ಅತ್ಯಂತ ಜನಪ್ರಿಯ ನಾಯಕ ನಾನೇ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೊಂಡಿದ್ದಾರೆ. 
ದಿ ಕ್ವಿಂಟ್ ಗೆ ನೀಡಿದ ಸಂದರ್ಶನದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಈ ರೀತಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಮೋದಿ ಸಂಪುಟದಲ್ಲಿರುವ ಇರುವ ಎಲ್ಲ ಸಂಸದರು ಆರ್ಥಿಕ ವಿಷಯದಲ್ಲಿ ದಡ್ಡರು ಎಂದು ಹೇಳಿದ್ದಾರೆ. 
ಕೇಂದ್ರ ಸಚಿವ ಸಂಪುಟದಲ್ಲಿರುವ ಒಬ್ಬ ಸಚಿವನಿಗೂ ಅರ್ಥಶಾಸ್ತ್ರದ ಬಗ್ಗೆ ತಿಳಿದಿಲ್ಲ. ಅರ್ಥಶಾಸ್ತ್ರವನ್ನು ಅರ್ಥೈಸುವ ಸಾಮರ್ಥ್ಯವು ಸಚಿವರಿಗಿಲ್ಲ ಎಂಬ ಗಂಭೀರ ಆರೋಪವನ್ನು ಸ್ವಾಮಿ ಮಾಡಿದ್ದಾರೆ.
ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಗೆ ಅರಿವಿದ್ದರೂ ಅವರು ತಪ್ಪಾದ ಸ್ನೇಹಿತರನ್ನು ಆಯ್ಕೆ ಮಾಡಿದ್ದಾರೆ. ಆದರೆ ಇವುಗಳನ್ನು ದಾಟಿ ಮುಂದಿನ ಅವಧಿಯಲ್ಲಿ ಅವರು ಉತ್ತಮ ಕೆಲಸ ಮಾಡಬಹುದು ಎಂಬ ಆಶಾವಾದವನ್ನೂ ಸ್ವಾಮಿ ವ್ಯಕ್ತಪಡಿಸಿದ್ದಾರೆ.
SCROLL FOR NEXT