ದೇಶ

ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ: ಶಿವಸೇನೆ

Srinivas Rao BV
ಮುಂಬೈ: ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಎನ್ ಡಿಎ ಮೈತ್ರಿಕೂಟ ಶಿವಸೇನೆ, ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ. 
ಮೋದಿ ಪ್ರಧಾನಿಯಾದ 4 ವರ್ಷಗಳಲ್ಲಿ ಹಲವು ಬ್ಯಾಂಕಿಂಗ್ ವಂಚನೆಗಳು ನಡೆದಿವೆ, ರೂಪಾಯಿಯನ್ನು ಡಾಲರ್ ಗೆ ಸಮಗೊಳಿಸುವ ಮೂಲಕ ತಾವು ನಿಜವಾದ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರಲ್ಲ ಎಂಬುದನ್ನು ತೋರಿಸಲು ಬಯಸಿದ್ದರು ಎಂದು ಸಾಮ್ನದಲ್ಲಿ ಬರೆದಿದೆ. 
ಮೋದಿ ರೂಪಾಯಿಯನ್ನು ಡಾಲರ್ ಗೆ ಸಮಗೊಳಿಸಲು ಬಯಸಿದ್ದರು. ಆದರೆ ಹಿಂದಿಗಿಂತಲೂ ರೂಪಾಯಿ ಮೌಲ್ಯ ಕುಸಿದಿದ್ದು ಭಾರತ ಮೋದಿ ಆಡಳಿತದಲ್ಲಿ ಆರ್ಥಿಕ ಅರಾಜಕತೆಗೆ ಸಿಲುಕಿ ತತ್ತರಿಸುತ್ತಿದೆ ಎಂದು ಹೇಳಿದೆ. 
SCROLL FOR NEXT