ಸಾಂದರ್ಭಿಕ ಚಿತ್ರ 
ದೇಶ

ಬೆಳೆಸಾಲ ಪಡೆಯಲು ಬಂದ ರೈತನ ಪತ್ನಿಯನ್ನು ಹಾಸಿಗೆಗೆ ಕರೆದ ಬ್ಯಾಂಕ್ ಮ್ಯಾನೇಜರ್!

: ಬೆಳೆ ಸಾಲ ಪಡೆಯಲು ಬಂದ ರೈತನ ಪತ್ನಿಯನ್ನು ಹಣಕಾಸು ಸಂಸ್ಥೆಯ ಅಧಿಕಾರಿ ‘ಹಾಸಿಗೆ’ಗೆ ಕರೆದ ಹೇಸಿಗೆ ಪ್ರಕರಣ ನಡೆದಿದೆ....

ಮುಂಬಯಿ: ಬೆಳೆ ಸಾಲ ಪಡೆಯಲು ಬಂದ ರೈತನ ಪತ್ನಿಯನ್ನು ಹಣಕಾಸು ಸಂಸ್ಥೆಯ ಅಧಿಕಾರಿ ‘ಹಾಸಿಗೆ’ಗೆ ಕರೆದ ಹೇಸಿಗೆ ಪ್ರಕರಣ ನಡೆದಿದೆ.
ಮಲ್ಕಾಪುರ ತಹಸೀಲ್‌ ವ್ಯಾಪ್ತಿಯ ದಾಟಲಾದಲ್ಲಿ ಈ ಪ್ರಕರಣ ನಡೆದಿದ್ದು  ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ರಾಜೇಶ್‌ ಹಿವಸೆ ಮತ್ತು ಇಲಾಖೆಯ ಗುಮಾಸ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪತಿಯ ಜತೆಗೂಡಿ ಬಂದಿದ್ದ ಮಹಿಳೆಯಿಂದ ಅರ್ಜಿ ಹಾಗೂ ಅವರ ಸಂಪರ್ಕ ವಿವರ ಪಡೆದುಕೊಂಡ ಅಧಿಕಾರಿ, ಆ ಬಳಿಕ ಕರೆ ಮಾಡಿ ಸಾಲ ಮಂಜೂರಿಗೆ ಪ್ರತಿಯಾಗಿ ತಮ್ಮ ಲೈಂಗಿಕ ವಾಂಛೆ ಈಡೇರಿಸುವಂತೆ ಕೇಳಿಕೊಂಡಿದ್ದ. ಅದಾಗಿ, ಅಂತಿಮ ಸಮ್ಮತಿ ಪಡೆದು ಬರಲು ಮಹಿಳೆಯ ಬಳಿಗೆ ಗುಮಾಸ್ತನನ್ನೂ ಕಳಿಸಿಕೊಟ್ಟಿದ್ದ. 
ರಾಜೇಶ್‌ ಮತ್ತು ಗುಮಾಸ್ತ ಇಬ್ಬರೂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರ ಕಸರತ್ತು ಮುಂದುವರಿದಿದೆ. 
ಅಧಿಕಾರಿ ಜತೆಗಿನ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದ ಮಹಿಳೆ, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT