ನಿವೃತ್ತಿಯ ಬಳಿಕ ವಿವಾದಾತ್ಮಕ ಹೇಳಿಕೆ ನಿರೀಕ್ಷಿಸಲಿಲ್ಲ: ಚಲಮೇಶ್ವರ್ ಹೇಳಿಕೆಗೆ ಬಾರ್ ಕೌನ್ಸಿಲ್ ತಿರುಗೇಟು 
ದೇಶ

ನಿವೃತ್ತಿಯ ಬಳಿಕ ವಿವಾದಾತ್ಮಕ ಹೇಳಿಕೆ ನಿರೀಕ್ಷಿಸಲಿಲ್ಲ: ಚಲಮೇಶ್ವರ್ ಹೇಳಿಕೆಗೆ ಬಾರ್ ಕೌನ್ಸಿಲ್ ತಿರುಗೇಟು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದವರು ಮಾದ್ಯಮಗಳೆದುರು ’ಅಪ್ರಸ್ತುತ’ ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಹೇಳಿದೆ.

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದವರು ಮಾದ್ಯಮಗಳೆದುರು ’ಅಪ್ರಸ್ತುತ’ ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು  ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಹೇಳಿದೆ. ನ್ಯಾಯಮೂರ್ತಿ ಚಲಮೇಶ್ವರ್ ತಾವು ನಿವೃತ್ತರಾದ ಮೂರು ದಿನಗಳ ನಂತರದಲ್ಲಿ ಮಾದ್ಯಮಗಳೆದು ನ್ಯಾಯಾಲಯ ವ್ಯವಸ್ಥೆ ಕುರಿತಂತೆ ’ಅಸಂಬದ್ದ’ ಹೇಳಿಕೆ ನಿಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ನ್ಯಾ.ಕೆ.ಎಂ. ಜೋಸೆಫ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಸೂಚಿಸುವ ಕ್ರಮವನ್ನು ’"ಸಮರ್ಥನೀಯವಾದ ಕ್ರಮವಲ್ಲ" ಎಂದು ಚ;ಅಮೇಶ್ವರ್ ವಾದಿಸಿದ್ದರು. 
ಕಳೆದ ಜನವರಿಯಲ್ಲಿ ಮೂರು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಜೊತೆಗೆ  ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಚಲಮೇಶ್ವರ್ ಸಿಜೆಐ ವಿರುದ್ಧ ಆರೋಪ ಮಾಡಿದ್ದರು.
ಚಲಮೇಶ್ವರ್ ಹೇಳಿಕೆ ಸಂಬಂಧ ಮಾತನಾಡಿದ ಬಿ.ಸಿ.ಐ. ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ  "ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯಿಂದ ಇಂತಹಾ ಹೇಳಿಕೆಗಳನ್ನು ನಿರೀಕ್ಷಿಸಲಾಗುವುದಿಲ್ಲ" ಎಂದಿದ್ದಾರೆ.
"ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದವರಿಗೆ ಸ್ವಯಂ ನಿಗ್ರಹವಿರಬೇಕು. ಅದು ಸದ್ಗುಣಿಗಳ ಲಕ್ಷಣ.. ಅವರು ಇದನ್ನು ಮರೆತಿದ್ದಾರೆಂದು ತೋರುತ್ತಿದೆ. ನಿವೃತ್ತಿಯಾದ ತಕ್ಷಣ ಮಾದ್ಯಮದೆದುರು ಇಂತಹಾ ’ಅಸಂಬದ್ದ’ ಹೇಳಿಕೆ ನಿಡುವುದು ಸಮರ್ಥನೀಯವಾಗಿಲ್ಲ. ಇವುಗಳ ಕುರಿತು ನಮಗೆ ಅಸಮ್ಮತಿ ಇದೆ.ಇಂತಹಾ ಹೇಳಿಕೆಕೆಗಳನ್ನು ದೇಶದ ಇತರ ವಕೀಲರು ಸಹ ಸಹಿಸಿಕೊಳ್ಳಲು ಆಗುವುದಿಲ್ಲ., ಜೀರ್ಣಿಸಿಕೊಳ್ಳಲಾಗುವುದಿಲ್ಲ" ಎಂದು ಬಿ.ಸಿ.ಐ ಹೇಳಿದೆ.
ಮಾದ್ಯಮಗಳೆದುರು ಮಾತನಾಡಿದ್ದ ನ್ಯಾಯಮೂರ್ತಿ ಚಲಮೇಶ್ವರ್ ಸುಪ್ರೀಂ ನ್ಯಾಯಮೂರ್ತಿಗಳ ನೇಮಕದಲ್ಲಿ ಫಿಕ್ಸಿಂಗ್ ನಡೆಸಲಾಗುತ್ತಿದೆ ಎಂಬರ್ಥದ  ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡಿದ್ದರು.ನ್ಯಾಯಾಲಯದ ಹುದ್ದೆಯಲ್ಲಿದ್ದಾಗಲೇ ಚಲಮೇಶ್ವರ್ ಈ ಸಂಬಂಧ ಆಕ್ಷೇಪ ಎತ್ತಬೇಕಾಗಿತ್ತು ಆದರೆ ನಿವೃತ್ತಿಯಾದ ಬಳಿಕ ಏಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಸಿಐ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT