ಕಣ್ಣೀರಿಡುತ್ತಿರುವ ದೇವತೆ: ವಿಸ್ಮಯಕಾರಿ ಘಟನೆ ನೋಡಲು ನೆರೆದ ಜನಸ್ತೋಮ 
ದೇಶ

ಕಣ್ಣೀರಿಡುತ್ತಿರುವ ದೇವತೆ: ವಿಸ್ಮಯಕಾರಿ ಘಟನೆ ನೋಡಲು ನೆರೆದ ಜನಸ್ತೋಮ

ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯಕಾರಿ ಘಟನೆಯನ್ನು ನೋಡಲು ಜನಸ್ತೋಮ ನೆರೆದಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ನ ಚಿನ್ನಕೊಡೂರು ಗ್ರಾಮದಲ್ಲಿ ನಡೆದಿದೆ.

ಸಿದ್ದಿಪೇಟ್: ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯಕಾರಿ ಘಟನೆಯನ್ನು ನೋಡಲು ಜನಸ್ತೋಮ ನೆರೆದಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ನ ಚಿನ್ನಕೊಡೂರು ಗ್ರಾಮದಲ್ಲಿ ನಡೆದಿದೆ. 
ಸದಾ ಮಂದಗತಿಯಲ್ಲಿ ಸಾಗುವ ಚಿನ್ನಕೊಡೂರು ಗ್ರಾಮದಲ್ಲಿನ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿರುವ ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯವನ್ನು ನೋಡಲು ಪಕ್ಕದ ಗ್ರಾಮದವರೂ ಧಾವಿಸುತ್ತಿದ್ದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ದೇವಿಯ ಕಣ್ಣೀರು ರಂಗಾ ನಾಯ್ಕ್ ಸಾಗರ್ ಯೋಜನೆಯಲ್ಲಿ ತಮ್ಮ ಗ್ರಾಮ ಮುಳುಗಡೆಯಾಗಬಹುದೆಂಬ ಸೂಚನೆಯಾಗಿದ್ದಿರಬಹುದು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. 
"ದೇವಿಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿರುವುದು ನಿಜ, ದೇವಿಯನ್ನು ಸಂತುಷ್ಟಗೊಳಿಸಲು ದೇವಾಲಯ ನಿರ್ಮಿಸಿಸಲು ತೀರ್ಮಾನಿಸಿ, ಆಶೀರ್ವಾದ ಬೇಡಿದ್ದೇವೆ" ಎಂದು ಗ್ರಾಮಸ್ಥರಾಗಿರುವ ಚಂದ್ರಮೌಳಿ ಹೇಳಿದ್ದಾರೆ. ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕಿ ಅಂಜವ್ವ ಈ ಘಟನೆಯನ್ನು ಮೊದಲು ಗಮನಿಸಿದ್ದಾರೆ. ಎಂದಿನಂತೆ ಪ್ರತಿ ನಿತ್ಯ ಪೂಜೆ ಸಲ್ಲಿಸಲು ಬಂದಿದ್ದಾಗ ವಿಗ್ರಹದಲ್ಲಿ ಕಣ್ಣೀರು ಕಾಣಿಸಿಕೊಂಡಿತ್ತು.  ಸುಮಾರು 15 ನಿಮಿಷಗಳ ಕಾಲ ಇದೇ ರೀತಿ ಮುಂದುವರೆದಿತ್ತು ಎಂದು ಅಂಜವ್ವ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT