ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ! 
ದೇಶ

ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!

ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ.

ಭೋಪಾಲ್: ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ. 
ಬಿಜೆಪಿಯಿಂದ 5 ಬಾರಿ ಸಂಸತ್ ಗೆ ಆಯ್ಕೆಯಾಗಿದ್ದ ಮಾಜಿ ಕೇಂದ್ರ ಆರೋಗ್ಯ ಸಚಿವ ಸರ್ತಾಜ್ ಸಿಂಗ್ ಗೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕೇಳಲಾಗಿದ್ದು, ಈ ವಿಷಯವನ್ನು ಸ್ವತಃ ಮಾಜಿ ಸಚಿವರೇ ಬಹಿರಂಗಪಡಿಸಿದ್ದಾರೆ. 
"ಇತ್ತೀಚೆಗಷ್ಟೇ ನಾನು ಐಸಿಯು ನಲ್ಲಿ ಚಿಕಿತ್ಸೆ ಪಡೆದಿದ್ದೆ, 5 ಲಕ್ಷ ರೂ ವೆಚ್ಚದ ಆಸ್ಪತ್ರೆಯ ಬಿಲ್ ನ ರಿಯಂಬರ್ಸ್‌ಮೆಂಟ್ ಪಡೆಯುವುದಕ್ಕೆ ಅಗತ್ಯವಿದ್ದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೋದಾಗ ಕಡತ ಪ್ರಕ್ರಿಯೆ ಪೂರ್ಣಗೊಳಿಸಲು ಆಸ್ಪತ್ರೆಯ ಸಿಬ್ಬಂದಿಗಳು ಕಮಿಷನ್ ಕೇಳಿದ್ದಾರೆ, ಸಂಸದನಾಗಿರುವ ನನಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಸ್ಥಿತಿಯೇನು ಎಂದು ಮಾಜಿ ಆರೋಗ್ಯ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. 
ಇಂದಿನ ದಿನಗಳಲ್ಲಿ ರಾಜಕೀಯ ಅತ್ಯಂತ ಶೋಚನೀಯ ಸ್ಥಿತಿ ತಲುಪಿದೆ ಎಂದು  ಸಚಿವ ಸರ್ತಾಜ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!

IPL 2026: DC vs PBKS ಪಂದ್ಯದ ವೇಳೆ ಅಪಘಾತ, ಕ್ಯಾಚ್ ಹಿಡಿಯುವ ವೇಳೆ Lungi Ngidi ಗೆ ಗಂಭೀರ ಗಾಯ, ಮೈದಾನಕ್ಕೇ ಆಗಮಿಸಿದ ಆ್ಯಂಬುಲೆನ್ಸ್!

ಡಾ.ರಾಜ್ ಸ್ಮಾರಕ ಕುರಿತು ಕೊಂಕು: ನಟ ಚೇತನ್ ಮನೆ ಮುಂದೆ ಹೈಡ್ರಾಮಾ, ಅವನನ್ನ ಬದುಕೋಕೆ ಬಿಡಲ್ಲ ಎಂದ ಸಾರಾ ಗೋವಿಂದ್, ಕ್ಷಮೆ ಯಾಚನೆ!

ರಾಮ್ ಮಾಧವ್ ಹೇಳಿಕೆಯಿಂದ ಕೇಂದ್ರದ 'ಅಪಾಯಕಾರಿ ಆದ್ಯತೆ' ಬಹಿರಂಗ; ಸ್ವಯಂ ಶರಣಾಗತಿಯ ಲಜ್ಜೆಗೆಟ್ಟ ಕೃತ್ಯ

BJP ಸೇರಿದ 7 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಉಪರಾಷ್ಟ್ರಪತಿಗೆ AAP ಪತ್ರ: ಸಂಜಯ್ ಸಿಂಗ್

SCROLL FOR NEXT