ಚೆನ್ನೈ: ಹಾಡಹಗಲೇ ಕಾಲೇಜು ಬಳಿ ಹುಡುಗಿಯ ಕತ್ತು ಸೀಳಿ ಕೊಲೆ 
ದೇಶ

ಚೆನ್ನೈ: ಹಾಡಹಗಲೇ ಕಾಲೇಜು ಬಳಿ ಹುಡುಗಿಯ ಕತ್ತು ಸೀಳಿ ಕೊಲೆ

ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಪಶ್ಚಿಮ ಕೆಕೆ ನಗರದ ಮೀನಾಕ್ಷಿ ಅಕಾಡೆಮಿ ಹೈಯರ್ ಎಜುಕೇಷನ್ ಕಾಲೇಜಿನ ಸಮೀಪ ಈ ದುರಂತ ಘಟಿಸಿದ್ದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಎಂ. ಅಶ್ವಿನಿ (19) ಮೃತ ದುರ್ದೈವಿಯಾಗಿದ್ದಾರೆ.
ಇಂದು (ಶುಕ್ರವಾರ) ಮಧ್ಯಾಹ್ನ 2.45ರ ಸುಮಾರಿಗೆ ಅಶ್ವಿನಿ ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣದತ್ತ ಬರುತ್ತಿದ್ದಳು. ಆವೇಳೆ ಅಲಗೇಶನ್  ಎನ್ನುವಾತ ಸಹ ಬರುತ್ತಿದ್ದ. ಕೈಯಲ್ಲಿ ಸೀಮ ಎಣ್ಣೆ ಬಾತಲಿ  ಹಿಡಿದಿದ್ದ ಆತ ಅಶ್ವಿನಿಯ ಕತ್ತನ್ನು ಚಾಕುವಿನಿಂದ ಸೀಳುವ ಮೂಲಕ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಘತನೆ ವಿವರ
ತಂದೆಯನ್ನು ಕಳೆದುಕೊಂಡಿದ್ದ ಅಶ್ವಿನಿ ಚೆನ್ನೈನ ಮಧುರವೋಯಲ್ ಎನ್ನುವಲ್ಲಿ ತನ್ನ ತಾಯಿಯ ಜತೆ ವಾಸವಾಗಿದ್ದಳು ಅದೇ ಪ್ರದೇಶದಲ್ಲಿ ಅಲಗೇಶನ್ ಸಹ ವಾಸ್ತವ್ಯವಿದ್ದನು. ಈತನು ನೀರಿನ ಕ್ಯಾನ್ ಗಳನ್ನು ಪೂರೈಕೆ ಮಾಡುವ ಉದ್ಯೋಗಿಯಾಗಿದ್ದು ಸ್ಥಳೀಯ ನಿವಾಸಿಯಾಗಿದ್ದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ ಅಲಗೇಶನ್ ತಾನು ಈ ಮೊದಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೋಲೀಸರು ಹೇಳಿದರು.
ಅಶ್ವಿನಿಯನ್ನು ಇರಿದು ಹತ್ಯೆ ಮಾಡಿದ ಆರೋಪಿ ಅಲಗೇಶನ್ ನ್ನು ಸ್ಥಳೀಯರು ಪೊಳಿಸರಿಗೆ ಒಪ್ಪಿಸಿದ್ದಾರೆ.
ಇದೇ ವೇಳೆ ಅಶ್ವಿನಿ ಕುಟುಂಬವು ಅಲಗೇಶನ್  ವಿರುದ್ಧ ಈ ಹಿಂದೆಯೇ ದೂರು ಸಲ್ಲಿಸಿತ್ತು,  ಪೋಲೀಸ್ ದೂರು ಸಲ್ಲಿಸಿದ್ದ ದಿನದಿಂಡಲೂ ಅಶ್ವಿನಿ ಕಾಲೇಜಿಗೆ ತೆರಳುತ್ತಿರಲಿಲ್ಲ. ಇದೇ ಕೆಲವು ದಿನಗಳ ಹಿಂದಷ್ಟೇ ಅವಳು ಪುನಃ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದ್ದಳು. ಆದರೆ ಆಕೆ ಜಾಫರ್ ಖಾನ್ ಪೇಟ್ ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ನೆಲೆಯಾಗಿದ್ದಳೆಂದು ಮೂಲಗಳು ಹೇಳಿದೆ.
ಚೆನ್ನೈ ನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ನಡೆಸಿ ಹತ್ಯೆ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಫ್. 20ರಂದು ಚೆನ್ನೈ ಅಣ್ಣಾ ನಗರ್ ಟವರ್ ಪಾರ್ಕ್ ನಲ್ಲಿ ತನ್ನ ಭಗ್ನ ಪ್ರೇಮಿಯೊಬ್ಬನಿಂದ ಸ್ನಾತಕ ವಿದ್ಯಾರ್ಥಿನಿಯೊಬ್ಬಳು ಆರು ಬಾರಿ ಚಾಕುವಿನಿಂದ ಇರಿತಕ್ಕೊಳಪಟ್ಟು ಹತ್ಯೆಯಾಗಿದ್ದಳು.  ಹೀಗೆ ಹತ್ಯೆ ನಡೆಸಿದ್ದ ಆರೋಪಿ ಎಲೆಕ್ಚ್ತಿಕಲ್ ಇಂಜಿನಿಯರ್ ಆಗಿದ್ದು ಆತ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಬಳಿಕ ಅದೇ ಚಾಕುವಿನಿಂದ ತನ್ನನ್ನು ಸಹ ಇರಿದುಕೊಂಡು ಸಾಯಲು ಮುಂದಾಗಿದ್ದ.
ಇನ್ನೊಂದು ಪ್ರಕರಣದಲ್ಲಿ ಕಳೆದ ವರ್ಷ ಏಪ್ರಿಲ್ ನಲ್ಲಿ ಜಾನ್ ಮ್ಯಾಥ್ಯೂ ಎನ್ನುವ ಇಪ್ಪತ್ತೆರಡರ ಯುವಕ ಯುವತಿಯೊಬ್ಬಳನ್ನು ಬರ್ಬರವಾಗಿ ಕೊಂದು ತಾನು ಸಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT