ನಟ ರಜನೀಕಾಂತ್ 
ದೇಶ

ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ: ನಟ ರಜನೀಕಾಂತ್

ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ...

ಹೃಷಿಕೇಶ: ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ. 
ಕಾವೇರಿ ವಿವಾದ ಸೇರಿದಂತೆ ತಮಿಳುನಾಡಿನ ಸಮಸ್ಯೆಗಳ ಬಗ್ಗೆ ರಜನೀಕಾಂತ್ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಸಹ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಕೆಲದಿನಗಳ ಕಾಲ ಧ್ಯಾನ ಕೈಗೊಳ್ಳುವುದಕ್ಕಾಗಿ ಉಳಿದುಕೊಂಡಿರುವ ದಯಾನಂದ ಸರಸ್ವತಿ ಆಶ್ರಮದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 
ನಾನು ಇನ್ನೂ ನನ್ನ ಪಕ್ಷವನ್ನು ಘೋಷಿಸಿಲ್ಲ. ಪ್ರಸ್ತುತ ನಾನು ರಾಜಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. 
ಹಿಮಾಲಯಕ್ಕೆ ತಾವು ಕೈಗೊಂಡಿರುವ ಆಧ್ಯಾತ್ಮಿಕ ಪ್ರವಾಸ ತನ್ನನ್ನು ತಾನು ಅರಿಯುವುದಕ್ಕಾಗಿ, ರಾಜಕಾರಣ ಆರಂಭಿಸಿರುವುದಕ್ಕೂ ಹಿಮಾಲಯದಲ್ಲಿ ಆಧ್ಯಾತ್ಮ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಮೊದಲ ಬಾರಿಗೆ ನಾನು ಹಿಮಾಲಯಕ್ಕೆ ಆಗಮಿಸುತ್ತಿಲ್ಲ. ನಾನು ಇಲ್ಲಿಗೆ ಹಲವಾರು ಬಾರಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT