ರಾಹುಲ್ ಗಾಂಧಿ 
ದೇಶ

ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದೆ: ರಾಹುಲ್ ಗಾಂಧಿ ವ್ಯಂಗ್ಯ

ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಸೇರಿಕೊಂಡು ...

ನವದೆಹಲಿ: ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಸೇರಿಕೊಂಡು ಮತದಾರರ ಹಾದಿತಪ್ಪಿಸಲು ಯತ್ನಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಈ ಮೂಲಕ ಮಾಧ್ಯಮಗಳಲ್ಲಿ ಬರುವ ಸತ್ಯವಾದ ವಿಚಾರಗಳನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.

ಅವರು ನಿನ್ನೆ ಮಾತನಾಡಿದಲ್ಲಿಂದ ಮುಂದುವರಿದು ಇಂದು, ಮತ್ತೆ ಬಿಜೆಪಿ ವಿರುದ್ಧ ಆರೋಪಿಸಿದ್ದು ಫೇಸ್ ಬುಕ್ ನಿಂದ ಬಳಕೆದಾರರ ದಾಖಲೆಗಳನ್ನು ಕದ್ದು ವಿವಾದಿತ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜೊತೆ ಕಾಂಗ್ರೆಸ್ ಕೈಜೋಡಿಸಿದೆ ಎಂದು ಆರೋಪಿಸುವ ಮೂಲಕ ಸತ್ಯ ಸುದ್ದಿ ಮರೆಮಾಚುವಂತೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸುಳ್ಳು ಹೇಳುವ ಕಾರ್ಖಾನೆಯ ರೀತಿ ಮತ್ತೆ ಕೆಲಸ ಆರಂಭಿಸಿದೆ. 2012ರಲ್ಲಿ ಕಾಂಗ್ರೆಸ್ ಪಕ್ಷವನ್ನು ಧ್ವಂಸ ಮಾಡಲು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಬಿಜೆಪಿ ಹಣ ನೀಡಿತ್ತು ಎಂದು ಪತ್ರಕರ್ತರು ಹೊರಹಾಕಲಿದ್ದ ದೊಡ್ಡ ಸುದ್ದಿಯನ್ನು ಬಿಜೆಪಿ ತಡೆಹಿಡಿದಿದೆ.

ತಮ್ಮ ಸಂಪುಟ ಸಚಿವರು ಸುಳ್ಳು ಸುದ್ದಿ ಹೇಳುವಂತೆ ಪ್ರೇರೇಪಿಸಿದರು. ಆಗ ಬಿಜೆಪಿಯ ಕೇಂದ್ರ ಸಚಿವರೇ ಆದ ರವಿಶಂಕರ್ ಪ್ರಸಾದ್ ಸುಳ್ಳು ಸುದ್ದಿ ನೀಡಿ ಕಾಂಗ್ರೆಸ್ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಕೈಜೋಡಿಸಿದೆ ಎಂದು ಹೇಳಿಬಿಟ್ಟರು. ಈ ಮಧ್ಯೆ ನಿಜವಾದ ಕಥೆ ಮುಚ್ಚಿಹೋಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಪಾದನೆ ಮಾಡಿದ್ದಾರೆ.

ಅಲ್ಲದೆ ಮಾಧ್ಯಮ ವರದಿಯನ್ನು ಕೂಡ ತಮ್ಮ ಟ್ವೀಟ್ ಗೆ ಟ್ಯಾಗ್ ಮಾಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಫೇಸ್ ಬುಕ್ ಮೂಲಕ ವಿವಾದಿತ ಕೇಂಬ್ರಿಡ್ಜ್ ಅನಾಲಿಟಿಕಾ ಕಂಪೆನಿ ಜೊತೆ ಸೇರಿಕೊಂಡು ಮತದಾರರ ದಾರಿ ತಪ್ಪಿಸಲಾಗಿತ್ತು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಕಳೆದೊಂದು ವಾರದಿಂದ ಪರಸ್ಪರ ಆರೋಪಗಳ ತೂಗುಯ್ಯಾಲೆಯಾಟ ಆಡುತ್ತಿವೆ.
ಇರಾಕ್ ನಲ್ಲಿ 39 ಭಾರತೀಯರ ಸಾವಿನ ವಿಷಯವನ್ನು ಮರೆಮಾಚಿ ಜನರ ಗಮನ ಬೇರೆಡೆಗೆ ಸೆಳೆಯಲು ಮಾಧ್ಯಮಗಳಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ವಿಷಯ ವಿಜೃಂಭಿಸುವಂತೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT