ದೇಶ

ಸಂಸತ್ತು ಗದ್ದಲದ ಹಿಂದಿನ ಕಾರಣಗಳನ್ನು ಸಂಸದರು ವಿವರಿಸುತ್ತಾರೆ; ಪ್ರಕಾಶ್ ಜವಡೇಕರ್

Manjula VN
ನವದೆಹಲಿ: ಸಂಸತ್ತು ಗದ್ದಲ ಕುರಿತ ಹಿಂದಿನ ಕಾರಣಗಳನ್ನು ಆಯಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಸದರೇ ಜನರಿಗೆ ವಿವರಣೆ ನೀಡುತ್ತಾರೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು ಶುಕ್ರವಾರ ಹೇಳಿದ್ದಾರೆ. 
ಸಂಸತ್ತು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಯುಡ್ಡು ಮಾಡುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಅವರ ಸೂಚನೆ ಮೇರೆಗೆ ಸಂಸತ್ತಿನಲ್ಲಿರುವ ಬಿಜೆಪಿ ಸಂದಸರು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಸತ್ತು ಗದ್ದಲ ಕುರಿತ ಹಿಂದಿನ ಕಾರಣಗಳನ್ನು ಜನರಿಗೆ ವಿವರಿಸುತ್ತಾರೆಂದು ಹೇಳಿದ್ದಾರೆ. 
ಸಂಸತ್ತು ಗದ್ದಲ ಕುರಿತಂತೆ ಈಗಾಗಲೇ ಪಕ್ಷದ ಸಂಸದರೊಂದಿಗೆ ಮಾತುಕತೆ ನಡೆಸಿರುವ ಅಮಿತ್ ಶಾ ಅವರು, ವಾರಾಂತ್ಯ ಸಂದರ್ಭಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಆಯಾ ಸಂಸದರು ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ಸಂಸತ್ತಿನಲ್ಲಿ ಉಂಟುಮಾಡಿದ ಗದ್ದಲದ ಹಿಂದಿನ ಕಾರಣಗಳನ್ನು ಕಾರ್ಯಕ್ರಮಗಳು ಹಾಗೂ ಪತ್ರಿಕಾಗೋಷ್ಠಿಯಲ್ಲಿ ಜನರಿಗೆ ವಿವರಿಸಬೇಕೆಂದು ತಿಳಿಸಿದ್ದರೆಂದು ಜವಡೇಕರ್ ಅವಹು ಹೇಳಿದ್ದಾರೆ. 
SCROLL FOR NEXT