ಕೋಲ್ಕತ್ತಾ: ರಾಮನವಮಿ ಅಂಗವಾಗಿ ಶಸ್ತ್ರಾಸ್ತ್ರ ಮೆರವಣಿಗೆ ನಡೆಸಿದ್ದನ್ನು ಪಶ್ಚಿಮ ಬಂಗಾಳದ ಸಂಸ್ಕೃತಿಯಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೆರವಣಿಗೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಸ್ತ್ರಾಸ್ತ್ರ ಮೆರವಣಿಗೆ ನಡೆಸುವುದು ಪಶ್ಚಿಮ ಬಂಗಾಳದ ಸಂಸ್ಕೃತಿಯ ಭಾಗವಲ್ಲ, ಇಂತಹ ಕೆಲಸಗಳನ್ನು ಮಾಡುವವರು ಧರ್ಮವನ್ನು ರಾಜಕೀಯಗೊಳಿಸಿ ಅವಮಾನ ಮಾಡುತ್ತಿದ್ದಾರೆ. ಈ ರೀತಿ ಮೆರವಣಿಗೆ ನಡೆಸುವುದಕ್ಕೆ ರಾಮ ಹೇಳಿದ್ದಾನೆಯೇ ಹಾಗಾದರೆ ರಾಮನಿಗೆ ಅವಮಾನ ಮಾಡುತ್ತಿರುವುದು ಯಾರು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಮೆರವಣಿಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ ಹಾಗೂ ಎಲ್ಲಾ ಎಸ್ ಪಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos