ಪಂಜಾಬ್: ಪ್ರೇಮ ವಿವಾಹವನ್ನೇ ನಿಷೇಧಿಸಿದ ಗ್ರಾಮ! 
ದೇಶ

ಪಂಜಾಬ್: ಈ ಗ್ರಾಮದಲ್ಲಿ ಪ್ರೇಮ ವಿವಾಹವೇ ನಿಷೇಧ!

ಯುವಜೋಡಿಯೊಂದು ಪ್ರೇಮಿಸಿ ವಿವಾಹವಾದ ಕಾರಣ ಗ್ರಾಮಪಂಚಾತ್ ಒಂದು ಗ್ರಾಮದಲ್ಲಿ ಪ್ರೇಮ ವಿವಾಹಕ್ಕೇ ನಿಷೇಧ ಹೇರಿದೆ.

ಲೂಧಿಯಾನ(ಪಂಜಾಬ್): ಯುವಜೋಡಿಯೊಂದು ಪ್ರೇಮಿಸಿ ವಿವಾಹವಾದ ಕಾರಣ ಗ್ರಾಮ ಪಂಚಾತ್ ಒಂದು ಗ್ರಾಮದಲ್ಲಿ ಪ್ರೇಮ ವಿವಾಹಕ್ಕೇ ನಿಷೇಧ ಹೇರಿದೆ. 
ಪಂಜಾಬ್ ನ ಲೂಧಿಯಾನ ಜಿಲ್ಲೆ ದೊರಾಹಾ ನಗರದ ಚಂಕೋಯಿಯನ್ ಖುರ್ದ್ ಗ್ರಾಮ ಪಂಚಾಯತ್ ಇಂತಹಾ ವಿಚಿತ್ರ ನಿರ್ಣಯ ತೆಗೆದುಕೊಂಡು ಅಚ್ಚರಿ ಮೂಡಿಸಿದೆ.
ಅಕ್ಕ ಪಕ್ಕದ ಹಳ್ಳಿಯವರಾದ ಯುವಕ, ಯುವತಿ ಪ್ರೇಮಿಸಿ ವಿವಾಹವಾಗಿದ್ದರು. ಆದರೆ ಅವರು ತಮ್ಮ ಕುಟುಂಬದ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದ ಆಕ್ರೋಶಗೊಂಡ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದಲ್ಲಿ ಪ್ರೇಮ ವಿವಾಹವನ್ನು ನಿಷೇಧಿಸಿದ್ದಲ್ಲದೆ ನವ ವಿವಾಹಿತ ಜೋಡಿ ಹಾಗೂ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ.
ಗ್ರಾಮದ ಯಾವುದೇ ಯುವಕ ಅಥವಾ ಯುವತಿ ಪೋಷಕರ ಅನುಮತಿ ಇಲ್ಲದೆ ಸ್ವ ಇಚ್ಚೆಯಿಂದ ಮದುವೆಯಾಗಿದ್ದರೆ ಅಂತಹಾ ಯುವಕ, ಯುವತಿಯರಿಗೆ ಸಾರ್ವಜನಿಕವಾಗಿ ಬಹಿಷ್ಕಾರ ಹಾಕಲಾಗುವುದು. ಒಂದು ವೇಳೆ ಗ್ರಾಮ ಪಂಚಾಯತ್ ಆದೇಶ ಉಲ್ಲಂಘನೆ ಮಾಡಿ ಅವರ ಕುಟುಂಬ ಅವರೊಡನೆ ವ್ಯವಹರಿಸಿದ್ದು ಕಂಡುಬಂದಲ್ಲಿ ಆ ಕುಟುಂಬಕ್ಕೆ ಸಹ ಬಹಿಷ್ಕಾರ ಶಿಕ್ಷೆ ನಿಡಲಾಗುತ್ತದೆ.
ಚಂಕೋಯಿಯನ್ ಖುರ್ದ್ ಗ್ರಾಮಪಂಚಾಯತ್ ಏ.29ರಂದು ಈ ನಿಣಯವನ್ನು ಅಂಗೀಕರಿಸಿದೆ. ಸ್ಥಳೀಯ ಗುರುದ್ವಾರ ಸಮಿತಿ ಹಾಗೂ ಗ್ರಾಮದ ಸ್ಪೋರ್ಟ್ಸ್‌ ಕ್ಲಬ್‌ಗ ಸಹ ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದೆ.
ನವ ಜೋಡಿಗೆ ಗ್ರಾಮದ ಯಾವ ಅಂಗಡಿಯವರು ದಿನಸಿ ನೀಡಬಾರದು. ಗ್ರಾಮದಲ್ಲಿನ ಸಾರ್ವಜನಿಕ ಪ್ರದೇಶಗಳನ್ನು ಅವರು ಬಳಸುವಂತಿಲ್ಲ. ಪಂಚಾಯತ್, ಗುರುದ್ವಾರಗಳಿಂದ ಅವರು ಯಾವ ಸೌಲಭ್ಯ ಪಡೆಯುವಂತಿಲ್ಲ ಎಂದು ನಿರ್ಬಂಧಗಳನ್ನು ಹಾಕಲಾಗಿದೆ.
ವಿವಾಹಿತ ವಧುವಿನ ಕುಟುಂಬವೇ ನಮಗೆ ಇಂತಹಾ ನಿರ್ಣಯ ತೆಗೆದುಕೊಳ್ಳುವಂತೆ ಹೇಳಿತ್ತು ಎಂದು ಪಂಚಾಯತ್ ಮುಖ್ಯಸ್ಥರಾದ ಹಕಮ್ ಸಿಂಗ್ಹೇಳಿದ್ದಾರೆ. ಆದರೆ ಇದು ಕಾನೂನು ಸಮ್ಮತವಾದ ಕ್ರಮವಲ್ಲ, ಇದರಿಂದ ಸಂವಿಧಾನ, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಲೂಧಿಯಾನ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮದಲ್ಲಿ ಇದುವರೆವಿಗೆ 6 ಜೋಡಿ ಪ್ರೇಮ ವಿವಾಹವಾಗಿದ್ದರು. ಅವರೆಲ್ಲರೂ ತಮ್ಮ ಪೋಷಕರ ಸಮ್ಮತಿಯಿಂದ ವಿವಾಹವಾಗಿದ್ದರು. ಆದರೆ ಈ ಜೋಡಿ ಮಾತ್ರ ಅವರ ವಿರುದ್ಧ ನಡೆದಿರುವುದರಿಂದ ಗ್ರಾಮಸ್ಥರೆಲ್ಲಾ ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹಳ್ಳಿಯ ಮುಖಂಡರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT