ಲೋಕಮಾನ್ಯ ತಿಲಕ್ 
ದೇಶ

ಲೋಕಮಾನ್ಯ ತಿಲಕ್ ಭಯೋತ್ಪಾದನೆಯ ಜನಕ: ವಿವಾದದಕ್ಕೆ ಕಾರಣವಾಯ್ತು ರಾಜಸ್ಥಾನದ 8 ನೇ ತರಗತಿ ಪಠ್ಯ

ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರನಾಥ ತಿಲಕ್ ಭಯೋತ್ಪಾದನೆಯ ಜನಕ ಎಂದು ರಾಜಸ್ಥಾನದ 8 ನೇ ತರಗತಿ ಪಠ್ಯದಲ್ಲಿ ಬರೆಯಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಅಜ್ಮೀರ್: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರನಾಥ ತಿಲಕ್ ಭಯೋತ್ಪಾದನೆಯ ಜನಕ ಎಂದು ರಾಜಸ್ಥಾನದ 8 ನೇ ತರಗತಿ ಪಠ್ಯದಲ್ಲಿ ಬರೆಯಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. 
8 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದ 22 ನೇ ಅಧ್ಯಾಯದ 18 ಹಾಗೂ 19 ನೇ ಶತಮಾನದಲ್ಲಿ ನಡೆದ ರಾಷ್ಟ್ರೀಯ ಚಳಿವಳಿಯ ಘಟನೆಗಳೆಂಬ ವಿಷಯದಲ್ಲಿ ಬಾಲಗಂಗಾಧರನಾಥ ತಿಲಕ್ ಅವರನ್ನು ಭಯೋತ್ಪಾದನೆಯ ಜನಕ ಎಂದು ಉಲ್ಲೇಖಿಸಲಾಗಿದೆ. 
ಬಾಲಗಂಗಾಧರನಾಥ ತಿಲಕ್ ಅವರು ರಾಷ್ಟ್ರೀಯ ಚಳುವಳಿಗೆ ಮಾರ್ಗದರ್ಶನ ನೀಡಿದವರು ಹಾಗಾಗಿ ಅವರನ್ನು ಭಯೋತ್ಪಾದನೆಯ ಜನಕ ಎಂದು ಕರೆಯಲಾಗುತ್ತದೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. 
ಮಥುರಾ ಮೂಲದ ಪ್ರಿಂಟರ್ ನಿಂದ ಪುಸ್ತಕ ಮುದ್ರಣಗೊಂಡಿದ್ದು, ಆಂಗ್ಲ ಮಾಧ್ಯಮಿಕ ಶಾಲೆಗಳಲ್ಲಿ ಈ ಪುಸ್ತಕವನ್ನು ಬೋಧಿಸಲು ಬಳಕೆ ಮಾಡಲಾಗುತ್ತಿದೆ.  ತಿಲಕರು ದೇಶದಲ್ಲಿ ವಿನೂತನವಾದ ಜಾಗೃತಿ ಮೂಡಿಸಿದರು. ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು, ಇದು ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಯಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT