ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿಯ ಕದನ ವಿರಾಮ ನಡೆಗೆ ಪಾಕಿಸ್ತಾನ ಸ್ಪಂದಿಸದೇ ಇರುವುದು ವಿಷಾದನೀಯ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ರಂಜಾನ್ ವೇಳೆಯಲ್ಲಿ ಕದನ ವಿರಾಮ ಹಾಕುವುದಕ್ಕೆ ವಿಶಾಲ ಹೃದಯವಿರಬೇಕಾಗುತ್ತದೆ. ನೀವು ನಮ್ಮ ಜನರ ನೋವನ್ನು ಮರೆಸುವ ನಿರ್ಧಾರ ಕೈಗೊಂಡಿದ್ದೀರಿ, ನಿಮ್ಮ ಒಂದು ಸಕಾರಾತ್ಮಕ ನಿರ್ಧಾರಕ್ಕೆ ನಾವು 10 ಸಕಾರಾತ್ಮಕ ನಿರ್ಧಾರ ಕೈಗೊಂಡು ಬೆಂಬಲ ಸೂಚಿಸುತ್ತೇವೆ, ನಿಮ್ಮ ಸಕಾರಾತ್ಮಕ ನಡೆಯನ್ನು ಪಾಕಿಸ್ತಾನ ಗುರುತಿಸದೇ ಇರುವುದು ವಿಷಾದನೀಯ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೆಹಬೂಬಾ ಮುಫ್ತಿ ಭಾಗಿಯಾಗಿದ್ದರು.