ಭೋಪಾಲ್: ಜೂನ್ 6ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ಮಲ್ಹಾರಗಢದಲ್ಲಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು ಈ ರ್ಯಾಲಿಗೆ ಮಲ್ಹಾರಗಢದ ಉಪ ವಿಭಾಗೀಯ ಅಧಿಕಾರಿ, ರಾಹುಲ್ ಗಾಂಧಿಗೆ 19 ಶರತ್ತುಗಳನ್ನು ಹಾಕಿದ್ದಾರೆ.
ಕೆಲ ಪ್ರಮುಖ ಶರತ್ತುಗಳು ಹೀಗಿವೆ:
* ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ಪದಗಳನ್ನು ಭಾಷಣದಲ್ಲಿ ಬಳಸಬಾರದು.
* ರ್ಯಾಲಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಕೂಡದು.
* ರ್ಯಾಲಿ ನಡೆಯುವ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್, ನೀರು, ಅಗ್ನಿಶಾಮಕ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕು.
* ರ್ಯಾಲಿಗಾಗಿ ಹಾಕಲಾಗುವ ಟೆಂಟ್ ಗಾತ್ರ 15 ಅಡಿ ಉದ್ದ 15 ಅಡಿ ಅಗಲ ಮೀರಬಾರದು.
* ರ್ಯಾಲಿಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಕೂಡದು. ರ್ಯಾಲಿ ಸ್ಥಳದಲ್ಲಿ ವಾಹನಗಳ ಕಳವು ನಡೆದರೆ ಅದಕ್ಕೆ ಸಂಘಟಕರೇ ಜವಾಬ್ದಾರರು.
* ನೈಸರ್ಗಿಕ ಪ್ರಕೋಪಗಳಿಂದ ಉದ್ಭವವಾಗುವ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಸಂಘಟಕರೇ ಮಾಡಬೇಕು.
* ರ್ಯಾಲಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸಬೇಕು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos