ತಿರುಚ್ಚಿ ದೇಗುಲದ ಮದವೇರಿದ ಆನೆಯಿಂದ ಮಾವುತನ ಮೇಲೆ ದಾಳಿ, ಸಾವು!
ತಿರುಚಿ: ತಮಿಳುನಾಡು ರಾಜ್ಯದ ತಿರುಚಿಯಲ್ಲಿರುವ ಸಮಯಪುರಂ ದೇಗುಲದಲ್ಲಿ ಮದವೇರಿದ ಆನೆಯೊಂದು ದಾಳಿ ನಡೆಸಿದ್ದು, ಆನೆ ದಾಳಿಗೆ ಮಾವುತ ಸಾವನ್ನಪ್ಪಿ ಇಬ್ಬರು ಭಕ್ತಾದಿಗಳಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.
9 ವರ್ಷದ ದೇಗುಲದ ಆನೆ ಗಜೇಂದ್ರ 50 ವರ್ಷದ ಮಸಿನಿ ಎಂಬ ಮಾವುತ ಮೇಲೆ ದಾಳಿ ಮಾಡಿದ್ದು, ದಾಳಿಗೆ ಮಾವುತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆನೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ದೇಗುಲದಲ್ಲಿದ್ದ ಇಬ್ಬರು ಭಕ್ತಾದಿಗಳು ಓಡಿ ಹೋಗಲು ಯತ್ನ ನಡೆಸಿದಾಗ ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಆನೆ ದೇಗುಲ ಒಳಗೇ ಇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ಮದವೇರಿದ ಆನೆಯನ್ನು ಹಿಡಿದು ಪಳಗಿಸಲು ಪ್ರಸ್ತುತ ದೇಗುಲದ ಅಧಿಕಾರಿಗಳು ಯತ್ನ ನಡೆಸುತ್ತಿದ್ದು, ಮಾವುತನ ಮೃತದೇಹವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos