ಮೇಘನಾ ಶ್ರೀವಾಸ್ತವ 
ದೇಶ

ಸ್ಥಿರತೆ ಮತ್ತು ಕಠಿಣ ಶ್ರಮ ಯಶಸ್ಸಿಗೆ ಕಾರಣ: ಸಿಬಿಎಸ್ ಇ ಟಾಪರ್ ಮೇಘನಾ

ಯಶಸ್ಸಿಗೆ ಯಾವುದೇ ರಹಸ್ಯ ಸೂತ್ರ ಇಲ್ಲ. ನಿರಂತರ ಅಭ್ಯಾಸ ಮತ್ತು ಕಠಿಣ ಶ್ರಮವೇ ನನ್ನ ಯಶಸ್ಸಿಗೆ ಕಾರಣ....

ನವದೆಹಲಿ: ಯಶಸ್ಸಿಗೆ ಯಾವುದೇ ರಹಸ್ಯ ಸೂತ್ರ ಇಲ್ಲ. ನಿರಂತರ ಅಭ್ಯಾಸ ಮತ್ತು ಕಠಿಣ ಶ್ರಮವೇ ನನ್ನ ಯಶಸ್ಸಿಗೆ ಕಾರಣ ಎಂದು ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿರುವ ಗಾಜಿಯಾಬಾದ್ ನ ಮೇಘನಾ ಶ್ರೀವಾಸ್ತವ ಅವರು ಹೇಳಿದ್ದಾರೆ.
ಮೇಘನಾ ಶ್ರೀವಾಸ್ತವ ಅವರು 500 ಅಂಕಗಳಿಗೆ 499 ಅಂಕ(ಶೇ 99.8) ಪಡೆದು ಟಾಪರ್ ಆಗಿದ್ದಾರೆ. ತಮ್ಮ ಈ ಸಾಧನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಘನಾ, ನನಗೆ ಸಂತಸವಾಗಿದೆ. ಇದನ್ನು ನಾನು ನಿರೀಕ್ಷಿರಲಿಲ್ಲ. ಟಾಪರ್‌ ಆದ ವಿಷಯದಲ್ಲಿ ಯಾವುದೇ ರಹಸ್ಯ/ಗುಟ್ಟು ಇಲ್ಲ, ಎಲ್ಲರೂ ವರ್ಷಪೂರ್ತಿ ಕಠಿಣ ಪರಿಶ್ರಮ ಹಾಕಿ ಓದಬೇಕು ಮತ್ತು ಸ್ಥಿರ ಮನಸ್ಥಿತಿಯನ್ನು ಹೊಂದಿರಬೇಕು ಎಂದಿದ್ದಾರೆ.
ನಾನು ಅಧ್ಯಯನ ಮಾಡಿದ ಗಂಟೆಗಳ ಸಂ‌ಖ್ಯೆಯನ್ನು ಎಂದಿಗೂ ಲೆಕ್ಕ ಹಾಕಿಲ್ಲ. ನನ್ನ ಶಿಕ್ಷಕರು ಮತ್ತು ಪೋಷಕರು ನಿಜವಾಗಿಯೂ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ನನಗೆ ಎಂದಿಗೂ ಒತ್ತಡ ಹಾಕಿಲ್ಲ ಎಂದು ಮೇಘನಾ ಹೇಳಿದ್ದಾರೆ.
ಮೇಘನಾ ಸಿಬಿಐ ಮಾಜಿ ನಿರ್ದೇಶಕ ಅನಿಲ್ ಸಿನ್ಹಾ ಅವರ ಸಂಬಂಧಿಯಾಗಿದ್ದು, ಅವಳು ಮೊದಲಿನಿಂದಲೂ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT