ಸಾಜಿ 
ದೇಶ

'ಸತ್ತ' ವ್ಯಕ್ತಿ ಅಂತ್ಯ ಸಂಸ್ಕಾರವಾದ 15 ದಿನದ ಬಳಿಕ ಬದುಕಿ ಬಂದ!

49 ವರ್ಷದ ಮೃತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ 15 ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ....

ವಯನಾಡ್: 49 ವರ್ಷದ ಮೃತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ 15 ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ ವಿಚಿತ್ರ ಘಟನೆ ಕೇರಳದ ವಯನಾಡ್ ನಲ್ಲಿ ನಡೆದಿದೆ. 
ಕಳೆದ ಸೆಪ್ಟೆಂಬರ್ 3 ರಂದು ಮನೆಯಿಂದ ಹೊರಟಿದ್ದ ಸಾಜಿ ಎಂಬ ವ್ಯಕ್ತಿ ಮನೆಯವರನ್ನು ಸಂಪರ್ಕಿಸಿಯೇ ಇರಲಿಲ್ಲ. ಇತ್ತೀಚಿಗೆ ಕರ್ನಾಟಕದ ಬೈರಕುಪ್ಪೆಯಲ್ಲಿ ಸಿಕ್ಕ ಅರೆಕೊಳೆತ ಶವವೊಂದನ್ನು ಆತನದೆಂದು ತಪ್ಪಾಗಿ ಗುರುತಿಸಿದ ಸಾಜಿ ತಾಯಿ ಮತ್ತು ಕಿರಿಯ ಸಹೋದರ ಶವವನ್ನು ಊರಿಗೆ ಕೊಂಡೊಯ್ದು ಅಕ್ಟೋಬರ್ 16ರಂದು ಅಂತ್ಯ ಸಂಸ್ಕಾರ ಮಾಡಿದ್ದರು. 
ಎರಡು ದಿನಗಳ ಹಿಂದೆ ಸಾಜಿ ಮನೆಗೆ ಬಂದಾಗ ಮನೆಯವರಿಗೆಲ್ಲ ಅಚ್ಚರಿ ಕಾದಿತ್ತು. ಅಲ್ಲದೆ ತಾನು ಸತ್ತನೆಂದು ತನ್ನ ಅಂತ್ಯ ಸಂಸ್ಕಾರ ಮಾಡಲಾಯಿತು ಎಂಬ ಸುದ್ದಿ ಕೇಳಿ ಸಾಜಿಗೂ ಶಾಕ್ ಆಯಿತು.
ಸಾಜಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ಹೋದಾಗ ಅಪರಿಚಿತ ಶವವೊಂದು ಸಿಕ್ಕಿರುವ ಬಗ್ಗೆ ಪೊಲೀಸರು ಹೇಳಿದ್ದರು. ಶವದ ಕಾಲ ಮೇಲೆ ಸರ್ಜರಿ ಮಾಡಿದ ಗುರುತಿತ್ತು. ನನ್ನ ಅಣ್ಣನಿಗೂ ಕಾಲಿನ ಸರ್ಜರಿಯಾಗಿತ್ತು. ಶವ ಹತ್ತಿರ ಬಿದ್ದಿದ್ದ ಚಪ್ಪಲಿ ಮತ್ತು, ಮೃತನ ಶರೀರದ ಮೇಲಿದ್ದ ಬಟ್ಟೆಗಳು ಸಹ ತನ್ನ ಅಣ್ಣ ಸಾಜಿಯದ್ದನ್ನೇ ಹೋಲುತ್ತಿದ್ದವು. ಹೀಗಾಗಿ ಮೃತ ದೇಹ ಅಣ್ಣನದೇ ಇರಬೇಕೆಂದು ಭಾವಿಸಿದೆ ಎಂದು ಸಾಜಿ ಸಹೋದರ ಹೇಳಿದ್ದಾನೆ.
ಸಾಜಿ ಬದುಕಿದ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೇರಳದಲ್ಲಿ ಅಂತ್ಯ ಸಂಸ್ಕಾರ ನಡೆದ ವ್ಯಕ್ತಿಯ ಪ್ರಕರಣ ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ