ಐಎನ್ ಎಸ್ ಅರಿಹಂತ್ 
ದೇಶ

ಗಸ್ತು ಮುಗಿಸಿದ ಐಎನ್ಎಸ್ ಅರಿಹಂತ್, ಇನ್ನು ಮುಂದೆ ಪರಮಾಣು ಬೆದರಿಕೆ ಇಲ್ಲ ಎಂದ ಪ್ರಧಾನಿ

ಗಸ್ತು ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನ...

ನವದೆಹಲಿ: ತನ್ನ ಪ್ರಥಮ ಭೀತಿಕಾರಕ ಗಸ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ  ಶ್ಲಾಘಿಸಿದ್ದಾರೆ.
ದೇಶದ ರಕ್ಷಣೆಯಲ್ಲಿ, ವಿರೋಧಿಗಳನ್ನ ನಾಶ ಮಾಡುವ ಶಕ್ತಿಶಾಲಿ ಐಎನ್ಎಸ್ ಅರಿಹಂತ್ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ವಾಪಸ್​ ಬಂದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ರಕ್ಷಣೆಗೆ ಈ ನೌಕೆ ದೇಶದ ಆಸ್ತಿ ಎಂದರು.
ನಮ್ಮ ರಾಷ್ಟ್ರದ ರಕ್ಷಣೆ ಅಥವಾ ಭದ್ರತೆಯನ್ನ ಹೆಚ್ಚು ಮಾಡುವ ಪ್ರಕ್ರಿಯೆಯಲ್ಲಿ ಐಎನ್​ಎಸ್​ ಅರಿಹಂತ್ ಮೊದಲ ಹೆಜ್ಜೆಯಾಗಿದೆ.  ಅರಿಹಂತ್ ಗಸ್ತು ಪೂರ್ಣಗೊಳಿಸುವ ಮೂಲಕ ನಮ್ಮ ರಾಷ್ಟ್ರದ ವೈರಿಗಳಿಗೆ ಬಹಿರಂಗ ಸವಾಲು ಹಾಕಿದೆ ಎಂದು ಹೇಳಿದರು.
ಇನ್ನು ಮುಂದೆ ಯಾರೂ ನಮಗೆ ಪರಮಾಣು ಬೆದರಿಕೆ ಹಾಕುವುದಿಲ್ಲ. ಪರಮಾಣು ಬಾಂಬ್​ ಹಾಕುವ ಬೆದರಿಕೆ ಹಾಕುವವರಿಗೆ ಅರಿಹಂತ್​ ಹಂತ ಸ್ಪಷ್ಟ ಉತ್ತರವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ದೀಪಾವಳಿಗೂ ಮುನ್ನ ಈ ಸಾಧನೆ ಮಾಡಿದ ಭಾರತೀಯ ನೌಕಾಪಡೆಯನ್ನು ಧನ್‌ತೇರಾ ಸ್ಪೆಷಲ್‌ ಎಂದು ವರ್ಣಿಸಿರುವ ಪ್ರಧಾನಿ ಮೋದಿ, "ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು. ಇತಿಹಾಸದಲ್ಲಿ ಇದು ಸದಾ ಸ್ಮರಣೀಯವಾಗಿರುತ್ತದೆ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT