ರಾಜ್ ಠಾಕ್ರೆ 
ದೇಶ

'ಸೇವ್ ಅನಿಲ್ ಅಂಬಾನಿ ಪ್ರಾಜೆಕ್ಟ್' ಗಾಗಿ ಅವನಿಯನ್ನು ಕೊಲ್ಲಲಾಗಿದೆ: ರಾಜ್ ಠಾಕ್ರೆ

ಉದ್ಯಮಿ ಅನಿಲ್ ಅಂಬಾನಿ ಯವತ್ಮಾಲ್ ನಲ್ಲಿ ಆರಂಭಿಸಬೇಕೆಂದಿರುವ ಪ್ರಾಜೆಕ್ಟ್ ಅನ್ನು ರಕ್ಷಿಸಿಕೊಳ್ಳಲು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅವನಿ ...

ಮುಂಬಯಿ: ಉದ್ಯಮಿ ಅನಿಲ್ ಅಂಬಾನಿ ಯವತ್ಮಾಲ್ ನಲ್ಲಿ ಆರಂಭಿಸಬೇಕೆಂದಿರುವ ಪ್ರಾಜೆಕ್ಟ್ ಅನ್ನು ರಕ್ಷಿಸಿಕೊಳ್ಳಲು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅವನಿ ಹುಲಿಯನ್ನು ಕೊಂದಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಂಬಾನಿ ಗ್ರೂಪ್ ವಕ್ತಾರ ಯಾವತ್ಮಾಲ್ ನಲ್ಲಿ ನಾವು ಯಾವುದೇ ಪ್ರಾಜೆಕ್ಟ್ ಆರಂಭಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಂಬಾನಿ ಗ್ರೂಪ್ ಸ್ಥಾಪಿಸಲು ಉದ್ದೇಶಿಸಿರುವ ಪ್ರಾಜೆಕ್ಟ್ ಅವನಿ ಹುಲಿ ಸತ್ತ  ಪ್ರದೇಶದಿಂದ ತುಂಬಾ ದೂರದಲ್ಲಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಜೆಕ್ಟ್ ಗೂ ಹುಲಿಯನ್ನು ಕೊಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ, 
ಕಳೆದ 2 ವರ್ಷಗಳಲ್ಲಿ ಅವನಿ ಹುಲಿ 13 ಮಂದಿಯನ್ನು ಕೊಂದು ನರಭಕ್ಷಕನಾಗಿತ್ತು ಹೇಳಲಾಗುತ್ತಿದೆ. ಕಳೆದ ಶುಕ್ರವಾರ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 
ಸೇವ್ ಅನಿಲ್ ಅಂಬಾನಿ ಪ್ರಾಜೆಕ್ಟ್ ಗಾಗಿ ಅವನಿಯನ್ನು ಕೊಲ್ಲಲಾಗಿದೆ, ಹುಲಿಯಿಂದ ಸಾವನ್ನಪ್ಪಿದವರ ಬಗ್ಗೆ ನನಗೆ ನೋವಿದೆ, ಆದರೆ ಪ್ರಪಂಚಾದ್ಯಂತ ಜನರು ಅರಣ್ಯ ಒತ್ತುವರಿ ಮಾಡಿಕೊಂಡ ಕಾರಣ, ನಾಡಿಗೆ ಬರುವ ಹುಲಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿವೆ ಎಂದು ರಾಜ್ ಠಾಕ್ರೆ ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT