ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ, ತಪ್ಪು ಸಂದೇಶ ರವಾನೆಯಾಗುತ್ತಿದೆ: ಕೇಂದ್ರ ಸರ್ಕಾರ 
ದೇಶ

ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ, ತಪ್ಪು ಸಂದೇಶ ರವಾನೆಯಾಗುತ್ತಿದೆ: ಕೇಂದ್ರ ಸರ್ಕಾರ

ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯಷ್ಟು ಮೀಸಲು ನಿಧಿಯನ್ನು ಕೇಳಿಲ್ಲ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.

ನವದೆಹಲಿ: ಒಂದು ವಾರದಿಂದ ಆತಂಕಕ್ಕೆ ಕಾರಣವಾಗಿರುವ ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ನಿರ್ಣಾಯಕ ಹಂತ ತಲುಪುವ ಸೂಚನೆಗಳು ಬಂದಿದ್ದು, ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯಷ್ಟು ಮೀಸಲು ನಿಧಿಯನ್ನು ಕೇಳಿಲ್ಲ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.
ಆರ್ ಬಿಐಗೆ ಸೂಕ್ತ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಪ್ರಸ್ತಾವನೆ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ, ಈ ಕುರಿತಾಗಿ ಮಾಧ್ಯಮಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಸರ್ಕಾರದ ಆರ್ಥಿಕ ಲೆಕ್ಕಾಚಾರಗಳು ಸರಿಯಾಗಿಯೇ ಇವೆ. ಈಗ ಹಬ್ಬಿರುವ ಮಾಹಿತಿಯ ಪ್ರಕಾರ ಆರ್ ಬಿಐ ನಿಂದ 3.6 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಕೇಳುತ್ತಿಲ್ಲ ಎಂದು ಸುಭಾಶ್ ಚಂದ್ರ ಗರ್ಗ್  ಟ್ವೀಟ್ ಮಾಡಿದ್ದಾರೆ.  
ಇದೇ ವೇಳೆ ಆರ್ಥಿಕ ಮಾರ್ಗಸೂಚಿಗಳ ಬಗ್ಗೆಯೂ ಮಾತನಾಡಿರುವ ಅವರು, ಸರ್ಕಾರ ಹಾಕಿಕೊಂಡಿರುವ ಹಣಕಾಸಿನ ಕೊರತೆಯ ಮಟ್ಟವನ್ನು ಶೇ.3.3 ಕ್ಕೆ ತರುವ ಗುರಿ ಹೊಂದಿದೆ. ಈ ಟಾರ್ಗೆಟ್ ಗೆ ಈಗಲೂ ಸರ್ಕಾರ ಬದ್ಧವಾಗಿದೆ. 2018-19 ರ ಆರ್ಥಿಕ ವರ್ಷವನ್ನು ಆರ್ಥಿಕ ಕೊರತೆಯನ್ನು ಶೇ.3.3 ರಷ್ಟಿರುವಂತೆ ಪೂರ್ಣಗೊಳಿಸುತ್ತೇವೆ, ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ ಬದಲಾಗಿ ಕೇವಲ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಪ್ರಸ್ತಾವನೆ ಬಗ್ಗೆ ಮಾತ್ರ ಚರ್ಚೆ ನಡೆದಿದೆ ಎಂದು ಸುಭಾಶ್ ಚಂದ್ರ ಗರ್ಗ್ ಸ್ಪಷ್ಟಪಡಿಸಿದ್ದಾರೆ. 
ನ.19 ರಂದು ಆರ್ಥಿಕ ಬಂಡವಾಳ ಚೌಕಟ್ಟಿನ ಬಗ್ಗೆಯೂ ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಪಂಚಾಯ್ತಿ ಚುನಾವಣೆ ನಡೆಸಲು ಸಚಿವ ಸಂಪುಟದ ನಿರ್ಧಾರ: EVM ಬದಲು ಮತಪೆಟ್ಟಿಗೆ ಬಳಕೆ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!