ಫರೀದಾಬಾದ್: ಟಾಟಾ ಸ್ಟೀಲ್ ಕಂಪನಿಯ ಹಿರಿಯ ಮ್ಯಾನೇಜರ್ ಗೆ ಕಂಪನಿಯ ಮಾಜಿ ನೌಕರನೊಬ್ಬ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ,
ಶುಕ್ರವಾರ ಸುಮಾರು 1.10 ನಿಮಿಷಕ್ಕೆ ಫರೀದಾಬಾದ್ ನ ಕಚೇರಿಯಲ್ಲಿ ಮ್ಯಾನೇಜರ್ ಅರವಿಂದಮ್ ಪಲ್ ಅವರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
ಕೂಡಲೇ ಅರವಿಂದಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯವೇ ಅವರು ಕೊನೆಯುಸಿರೆಳೆದಿದ್ದಾರೆ.
ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಕಂಪನಿಯಲ್ಲಿ ಪಾಂಡೆ, 2015ರಿಂದ 2018ರ ವರೆಗೆ ಕೆಲಸ ಮಾಡಿದ್ದ, ಈ ವರ್ಷದ ಆಗಸ್ಟ್ ತಿಂಗಳಿನಿಂದ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅರವಿಂದ್ ದೇಹದೊಳಗೆ ಐದು ಬುಲೆಟ್ ಗಳು ಹೊಕ್ಕಿದ್ದವು. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos