ಬಾಂಬೆ ಹೈಕೋರ್ಟ್ 
ದೇಶ

'ನಪುಂಸಕ' ಎಂದರೆ ಮಾನಹಾನಿ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಒಬ್ಬ ವ್ಯಕ್ತಿಯನ್ನು "ನಪುಂಸಕ" ಅಥವಾ "ಶಂಡ" ಎಂದು ಕರೆಯುವುದು ಆತನ ಪುರುಷತ್ವವನ್ನು ಕೆಟ್ಟದಾಗಿ ಬಿಂಬಿಸಿದಂತೆ.ಆತನಿಗೆ ಇದರಿಂದ ಮಾನಸಿಕ ನೋವು ತರಬಹುದು.

ನಾಗ್ಪುರ್(ಮಹಾರಾಷ್ಟ್ರ): ಒಬ್ಬ ವ್ಯಕ್ತಿಯನ್ನು "ನಪುಂಸಕ" ಅಥವಾ "ಶಂಡ" ಎಂದು ಕರೆಯುವುದು ಆತನ ಪುರುಷತ್ವವನ್ನು ಕೆಟ್ಟದಾಗಿ ಬಿಂಬಿಸಿದಂತೆ.ಆತನಿಗೆ ಇದರಿಂದ ಮಾನಸಿಕ ನೋವು ತರಬಹುದು. ಇದರಿಂದ ಅದು ಮಾನಹಾನಿ ಪ್ರಕರಣವಾಗಲಿದೆ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಸ್.ಬಿ. ಶುಕ್ರೆ ಈ ತೀರ್ಪು ನೀದಿದ್ದು ವ್ಯಕ್ತಿಯೊಬ್ಬನನ್ನು "ನಪುಂಸಕ" ಎನ್ನುವು ಅವನ ಪುರುಷತ್ವಕ್ಕೆ ಮಾಡುವ ಅವನ್ಮಾನವಾಗಿದ್ದು ಇದಕ್ಕಾಗಿ ಆತ ರತೀಯ ದಂಡ ಸಂಹಿತೆಯ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿ ಆರೋಪಿಗೆ ಶಿಕ್ಷೆಗಾಗಿ ವಿನಂತಿಸಬಹುದಾಗಿದೆ ಎಂದರು.
ವಿವಾಹ ಸಂಬಂಧ ಬೇರ್ಪಟ್ಟು ಪ್ರತ್ಯೇಕವಾಗಿದ್ದ ದಂಪತಿಗಳ ನಡುವಿನ ವಿವಾದದ ಸಂಬಂಧ ನ್ಯಾಯಾಲಯ ಈ ತಿರ್ಪು ನೀಡಿದೆ.ಪತಿಯ ದೂರಿನನ್ವಯ ಅಪರಾಧ ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಿದ ಕ್ರಮವನ್ನು ತಡೆಹಿಡಿಯಲು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ "ಇದು ಮಾನಹಾನಿ ಪ್ರಕರಣ ದಾಖಲಿಸಲು ಅವಕಾಶವಾಗಲಿದೆ" ಎಂದಿದೆ.
ಬಾಂಬೆ ಹೈಕೋರ್ಟ್ ನ ಈ ತೀರ್ಪು ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ನಪುಂಸಕತ್ವದ ಕಾರಣಕ್ಕಾಗಿ ವಿಚ್ಚೇದನ ಕೇಳುವ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲು ಅನುಕೂಲವಾಗಲಿದೆ.
ಪ್ರಕರಣ  ಸಂಬಂಧ ಪತ್ನಿ ವಿರುದ್ಧ ಪ್ರಾರಂಭವಾಗಿರುವ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಲು ಕೋರ್ಟ್ ನಿರಾಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT