ಸಂಗ್ರಹ ಚಿತ್ರ 
ದೇಶ

ಮಹಾರಾಷ್ಟ್ರ: ಮಹಿಳೆ ಹೊಟ್ಟೆಯಲ್ಲಿ ಮಂಗಳಸೂತ್ರ, ಬೋಲ್ಟ್, ಪಿನ್'ಗಳು ಸೇರಿ 1.5 ಕೆಜಿ ವಸ್ತು ಪತ್ತೆ!

ಮಂಗಳಸೂತ್ರ, ನಟ್'ಗಳು, ಸೇಫ್ಟಿ ಪಿನ್ ಗಳು, ಯು-ಪಿನ್ ಗಳು, ತಾಮ್ರದ ರಿಂದ್ ಸೇರಿ ಸುಮಾರು 1.5 ಕೆಜಿ ಯಷ್ಟು ವಸ್ತುಗಳು ಮಾನಸಿಕ ಅಸ್ವಸ್ತ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿವೆ...

ಅಹಮದಾಬಾದ್: ಮಂಗಳಸೂತ್ರ, ನಟ್'ಗಳು, ಸೇಫ್ಟಿ ಪಿನ್ ಗಳು, ಯು-ಪಿನ್ ಗಳು, ತಾಮ್ರದ ರಿಂದ್ ಸೇರಿ ಸುಮಾರು 1.5 ಕೆಜಿ ಯಷ್ಟು ವಸ್ತುಗಳು ಮಾನಸಿಕ ಅಸ್ವಸ್ತ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿವೆ. 
ಮಹಾರಾಷ್ಟ್ರದ ಶಿರಡಿ ಮೂಲದವರಾಗಿರುವ ಸಂಗೀತ ಎಂಬ ಮಹಿಳೆ ಅತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
ಸಂಗೀತಾ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಬೀದಿಗಳಲ್ಲಿ ಅಲೆದಾಡುತ್ತಿದ್ದರು. ನ್ಯಾಯಾಲಯದ ಆದೇಶದಂತೆಯೇ ಅವರನ್ನು ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಅತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಳಿಕ ಅ.31 ರಂದು ನಾಗರೀಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳಿಕ ಹೊಟ್ಟೆ ಕಲ್ಲಿನಂತೆ ಗಟ್ಟಿಯಾಗಿರುವುದು ಕಂಡು ಬಂದಿದೆ. ಬಳಿಕ ಎಕ್ಸ್'ರೇ ತೆಗೆದ ವೈದ್ಯರಿಗೆ ಮಹಿಳೆಯ ಶ್ವಾಸಕೋಶದಿಂದ ಸೇಫ್ಟಿ ಪಿನ್ ಗಳು ಹೊರಗೆ ಬಂದಿರುವುದು ಕಂಡು ಬಂದಿದೆ. ಇದರಂತೆ ಪಿನ್ ವೊಂದು ಮಹಿಳೆಯ ಹೊಟ್ಟೆಯನ್ನು ಸೀಳಿದೆ. ಕೂಡಲೇ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ. 
ಇದರಂತೆ ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ಸುಮಾರು 1.5 ಕೆಜಿಯಷ್ಟು ಪಿನ್'ಗಳು, ಮಂಗಳಸೂತ್ರ, ಹೇರ್ ಪಿನ್, ಯು ಪಿನ್, ಬಳೆಗಳನ್ನು ಹೊರಗೆ ತೆಗೆದಿದ್ದಾರೆ. 
ಮಹಿಳೆ ಅಕ್ಯೂಫಾಗಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚೂಪಾದ ವಸ್ತುಗಳನ್ನು ತಿನ್ನುವುದು ಈ ರೋಗದ ಲಕ್ಷಣವಾಗಿದೆ. ಈ ಕಾಯಿಲೆ ಸಾಮಾನ್ಯವಾಗಿ ಮಾನಸಿಕ ಅಸ್ವಸ್ತರಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT