ಗಜ ಚಂಡಮಾರುತಕ್ಕೆ ಸಿಲುಕಿದ ಪುದುಕೊಟ್ಟೈಯ ಕೊಲ್ಲುಕಾಡು ಗ್ರಾಮ 
ದೇಶ

ಗಜ ಚಂಡಮಾರುತ: ಬಲಿಯಾದವರ ಸಂಖ್ಯೆ 35ಕ್ಕೆ ಏರಿಕೆ

ಗಜ ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇದುವರೆಗೆ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ ಎಂದು ...

ಚೆನ್ನೈ; ಗಜ ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇದುವರೆಗೆ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ ಎಂದು ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದುವರೆಗೆ 1,27, 448 ಮರಗಳು ಧರೆಗುರುಳಿವೆ ಎಂದಿದ್ದಾರೆ.

ನಾಗಪಟ್ಟಿಣಂ ಮತ್ತು ವೇದರಣ್ಯಂ ನಡುವೆ ತಮಿಳುನಾಡು ತೀರದ ಮೂಲಕ ದಾಟಿ ಹೋದ ಗಜ ಚಂಡಮಾರುತ 5-6 ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮತ್ತು ಸಾವು ನೋವನ್ನು ಉಂಟುಮಾಡಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಚಂಡಮಾರುತದಿಂದ ಹಲವು ಮನೆಗಳು, ಮರಗಿಡಗಳು ಧರೆಗುರುಳಿವೆ. ಎಲೆಕ್ಟ್ರಿಕ್ ಕೇಬಲ್ ಗಳು ಮುರಿದಿವೆ,

ನಿನ್ನೆ ಒಂದೇ ದಿನ 13 ಮಂದಿ ಮೃತಪಟ್ಟಿದ್ದು 28 ಜಾನುವಾರುಗಳು ಅಸುನೀಗಿವೆ. ಕದ್ದಲೂರು, ನಾಗಪಟ್ಟಿಂ, ರಾಮನಾಥಪುರಂ, ತಂಜಾವೂರು, ಪುದುಕೊಟ್ಟೈ ಮತ್ತು ತಿರುವಾರೂರು ಜಿಲ್ಲೆಗಳಲ್ಲಿ 81,949 ಜನರನ್ನು 471 ಆಶ್ರಯ ತಾಣಗಳಿಗೆ ವರ್ಗಾಯಿಸಲಾಗಿತ್ತು.

ನಾಗಪಟ್ಟಿಂ ಜಿಲ್ಲೆಯ ವೇಲಂಕಣ್ಣಿಯಲ್ಲಿ  16ನೇ ಶತಮಾನದ ಚರ್ಚ್ ಹಾನಿಗೀಡಾಗಿದೆ. ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಗಾ ಯಗೊಂಡವರಿಗೆ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಪರಿಹಾರ ಘೋಷಿಸಿದ್ದಾರೆ.

ಬೆಳೆ ಹಾನಿ, ಮೀನುಗಾರಿಕೆ ದೋಣಿಗಳು, ಮನೆಗಳು, ಜಾನುವಾರುಗಳುಗಳು ಮೃತಪಟ್ಟ ಬಗ್ಗೆ ಮೌಲ್ಯಮಾಪನ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಾವು ನೋವು ಮಾತ್ರವಲ್ಲದೆ 1,471 ಗುಡಿಸಲುಗಳು ಭಾಗಶಃ ಮತ್ತು 216 ಮನೆಗಳು ಸಂಪೂರ್ಣ ನಾಶಗೀಡಾಗಿವೆ.ಒಟ್ಟು 4,987 ಮರಗಳು ನೆಲಸಮವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಷ್ಕರದ ಬಿಸಿ, ಝೊಮ್ಯಾಟೊ, ಸ್ವಿಗ್ಗಿ ಸಿಬ್ಬಂದಿಗೆ ಹೆಚ್ಚಿನ ವೇತನ: ಹೊಸ ವರ್ಷದ ಮುನ್ನಾದಿನ ಗಿಗ್ ಕಾರ್ಮಿಕರಿಗೆ ಸಿಹಿಸುದ್ದಿ!

2026 ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜಗತ್ತಿನ 2ನೇ ರಾಷ್ಟ್ರ ನ್ಯೂಜಿಲೆಂಡ್, ಮೊದಲು ಯಾವುದು?

ಢಾಕಾ: ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ್ ಭಾಗಿ; ಕುಟುಂಬ ಭೇಟಿಯಾಗಿ ಸಾಂತ್ವನ

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಇಂದೋರ್‌: 'ಕಲುಷಿತ ನೀರು' ಕುಡಿದು ಇದುವರೆಗೆ ಏಳು ಜನ ಸಾವು; ಇಬ್ಬರು ಅಧಿಕಾರಿಗಳ ಅಮಾನತು

SCROLL FOR NEXT