ಜಿಗ್ನೆಶ್ ಮೇವಾನಿ 
ದೇಶ

ಕನ್ನಯ್ಯ ಕುಮಾರ್, ಜಿಗ್ನೆಶ್ ಮೇವಾನಿ ಮೇಲೆ ಮಸಿ ಎರಚಿದ ವ್ಯಕ್ತಿ

ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ...

ಗ್ವಾಲಿಯರ್: ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ ಬಲ ಪಂಥೀಯ ಸಂಘಟನೆಯ ವ್ಯಕ್ತಿಯೊಬ್ಬ ಮಸಿ ಎರಚಿತ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ಸಂವಿಧಾನ ಬಚಾವೋ ಆಂದೋಲನದ ಭಾಗವಾಗಿ ಇಂದು ವಾಣಿಜ್ಯ ಮಂಡಳಿ ಭವನದಲ್ಲಿ ಸೆಮಿನಾರ್ ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು.
ಹಿಂದು ಸೇನಾ ಸಂಘಟನೆಯ ಮುಕೇಶ್ ಪಾಲ್ ಎಂಬ ವ್ಯಕ್ತಿ ಈ ಇಬ್ಬರು ನಾಯಕರ ಮೇಲೆ ಮಸಿ ಎರಚಿದ್ದು, ಅದು ಅವರ ಶರ್ಟ್ ಮೇಲೆ ಬಿದ್ದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಎಸ್ ಎಸ್ ಥೋಮರ್ ಅವರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ನಿಗದಿಯಂತೆ ಸೆಮಿನಾರ್ ಉದ್ದೇಶಿಸಿ ಮಾತನಾಡಿದ್ದು, ಅದನ್ನು ವಿಡಿಯೋ ಮಾಡಲಾಗಿದೆ ಎಂದು ಥೋಮರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT