ನವಜೋತ್ ಸಿಂಗ್ ಸಿಧು 
ದೇಶ

ಕರ್ತಾರ್ ಪುರ್ ಕಾರಿಡಾರ್ ಭಾರತ-ಪಾಕ್ ನಡುವಿನ ವೈರತ್ವ ಅಳಿಸಲಿದೆ: ಸಿಧು

ಕರ್ತಾರ್ ಪುರ್‌ ಕಾರಿಡಾರ್‌ ಭಾರತ-ಪಾಕಿಸ್ತಾನ ನಡುವಿನ ವೈರತ್ವ ಅಳಿಸಿ ಹಾಕಲಿದೆ ಮತ್ತು ಉಭಯ ದೇಶಗಳ ನಡುವೆ ಶಾಶ್ವತ ...

ಲಾಹೋರ್‌: ಕರ್ತಾರ್ ಪುರ್‌ ಕಾರಿಡಾರ್‌ ಭಾರತ-ಪಾಕಿಸ್ತಾನ ನಡುವಿನ ವೈರತ್ವ ಅಳಿಸಿ ಹಾಕಲಿದೆ ಮತ್ತು ಉಭಯ ದೇಶಗಳ ನಡುವೆ ಶಾಶ್ವತ  ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುವ ಅಪರಿಮಿತ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಪಂಜಾಬ್‌ ಸಚಿವ ನವಜ್ಯೋತ್‌ ಸಿಂಗ್‌ ಸಿಧು ಅವರು ಮಂಗಳವಾರ ಹೇಳಿದ್ದಾರೆ.
ಸಿಧು ಅವರು ಭಾರತೀಯ ಪತ್ರಕರ್ತರೊಂದಿಗೆ ನಾಳೆ ಪಾಕಿಸ್ಥಾನದ ಕಡೆಯಿಂದ, ಪ್ರಧಾನಿ ಇಮ್ರಾನ್‌ ಖಾನ್‌ ಅವರು ನೆರವೇರಿಸಲಿರುವ ಕರ್ತಾರ್ ಪುರ್‌ ಕಾರಿಡಾರ್‌ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಹೋರ್ ಗೆ ಆಗಮಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ಕರ್ತಾರ್ ಪುರ್‌ ಕಾರಿಡಾರ್‌ ನಿಂದಾಗಿ ಭಾರತೀಯ ಸಿಕ್ಖರಿಗೆ ಪಾಕಿಸ್ಥಾನದ ರಾವಿ ನದಿ ತೀರದಲ್ಲಿರುವ ದರ್ಬಾರ್‌ ಸಾಹಿಬ್‌ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಸುವುದಕ್ಕೆ ಸುಲಭದ ಅವಕಾಶ ದೊರೆಯಲಿದೆ ಎಂದರು.
ಕರ್ತಾರ್ ಪುರ್ ಕಾರಿಡಾರ್‌  ಭಾರತ - ಪಾಕಿಸ್ಥಾನ ನಡುವೆ ಸ್ನೇಹ ಸೇತುವಾಗುವುದಲ್ಲದೆ ಹಳೆಯ ಕಹಿ ನೆನಪುಗಳನ್ನು ಅದು ಅಳಿಸಿ ಹಾಕಲಿದೆ ಎಂದು ಸಿಧು ಹೇಳಿದರು. 
ಕೇಂದ್ರ ಸರ್ಕಾರ ಕಳೆದ ವಾರ ಪಂಜಾಬ್‌ ನ ಗುರುದಾಸ್ ಪುರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಯ ವರೆಗೆ ತಾನು ಕಾರಿಡಾರ್‌ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಹೇಳಿತ್ತು. ಆ ಪ್ರಕಾರ ಸೋಮವಾರ ಭಾರತದ ಕಡೆಯಿಂದ ಶಿಲಾನ್ಯಾಸ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT