ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ 
ದೇಶ

ತೆಲಂಗಾಣ ಚುನಾವಣೆ: ಯಾಕೆ ಬ್ರದರ್, ಮನೆಯಲ್ಲಿ ತೃಪ್ತಿ ಸಿಗುತ್ತಿಲ್ಲವೇ?: ಬಿಜೆಪಿ ನಾಯಕ ರಾಜಾಗೆ ಓವೈಸಿ

ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ಆರಂಭವಾಗಿದೆ...

ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ಆರಂಭವಾಗಿದೆ. 
ಓವೈಸಿ ತಲೆ ಕಡಿದ ನಂತರವೇ ನನಗೆ ತೃಪ್ತಿ ಸಿಗುತ್ತದೆ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಅವರು ಹೇಳಿದ್ದರು. ರಾಜಾ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಓವೈಸಿ, ಯಾಕೆ ಸಹೋದರ? ಮನೆಯಲ್ಲಿ ನಿನಗೆ ತೃಪ್ತಿ ಸಿಗುತ್ತಿಲ್ಲವೇ ಎಂದು ಹೇಳಿದ್ದಾರೆ. 
ವಿಕರಾಬಾದ್ ಜಿಲ್ಲೆಯ ತಂದೂರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಓವೈಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಕ್ಷಕ್ಕೆ ಸೇರಿದ ಅಭ್ಯರ್ಥಿಗಳು ನನ್ನ ತಲೆ ಕಡಿದು, ಕಾಲಿನ ಕೆಳಗೆ ಇಟ್ಟುಕೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ಮನೆಯಲ್ಲಿ ನಿಮಗೆ ತೃಪ್ತಿ ಸಿಗುತ್ತಿಲ್ಲ ಎಂದರೆ, ವೈದ್ಯರ ಬಳಿ ಹೋಗಿ. ಇಲ್ಲವೇ ತಜ್ಞರ ಬಳಿ ಹೋಗಿ. ತೃಪ್ತಿ ಪಡೆಯಲು ಸಾಕಷ್ಟು ದಾರಿಗಳಿವೆ. ಎಲ್ಲವನ್ನೂ ನಾನು ವಿವರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಶ್ನಿಸಿರುವ ಓವೈಸಿ, ನಿಮ್ಮ ಪಕ್ಷದ ಸದಸ್ಯ ಸಿಂಗ್ ಅವರ ಹೇಳಿಕೆಯನ್ನು ನಾವು ಒಪ್ಪಿಕೊಂಡಿದ್ದೇ ಆದರೆ, ಮುಂದಿನ ಬಾರಿ ನೀವು ಹೈದರಾಬಾದ್'ಗೆ ಬಂದಾಗ, ಭಾಷಣ ಮಾಡಿದಾಗ, ಸ್ಪಷ್ಟನೆ ನೀಡಬೇಕು. ಒಂದು ವೇಳೆ ನೀವು ಸ್ಪಷ್ಟನೆ ನೀಡದೇ ಹೋದಲ್ಲಿ ನೀವು ತೃಪ್ತಿ ಪಡುತ್ತಿಲ್ಲ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ಓವೈಸಿ ಸಹೋದರ ಹಾಗೂ ಎಐಎಂಐಎಂ ನಾಯಕ ಮಾತನಾಡಿ, ಗಂಗೆಯ ಅಪವಿತ್ರತೆಗಿಂತಲೂ ಬಿಜೆಪಿ ಸಿದ್ಧಾಂತ ಅತ್ಯಂತ ಕೆಟ್ಟದಾಗಿದೆ. ಗಂಗೆ ಶುದ್ಧಿಗಾಗಿ ಬಿಜೆಪಿ ಸರ್ಕಾರ ರೂ.7,000 ಕೋಟಿ ಖರ್ಚು ಮಾಡಿದೆ. ನಾಲ್ಕು ವರ್ಷವಾದರೂ ಈಗಲು ಗಂಗೆ ಶುದ್ಧಿಗೊಂಡಿಲ್ಲ. ಬಿಜೆಪಿ, ಆರ್'ಎಸ್ಎಸ್, ಮೋದಿ ಹಾಗೂ ಮೋಹನ್ ಭಾಗವತ್ ಅವರ ಸಿದ್ಧಾಂತಗಳು ಅಪವಿತ್ರ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT