ನವಜ್ಯೋತ್‌ ಸಿಂಗ್‌ ಸಿಧು 
ದೇಶ

ಹೆರಾಯಿನ್​ಗಿಂತ ಗಸಗಸೆ ಉತ್ತಮ, ಅಫೀಮನ್ನು ಕಾನೂನುಬದ್ದಗೊಳಿಸಬೇಕು: ಸಿಧು

ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು

ಅಮೃತಸರ್: ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಆಮ್​ ಆದ್ಮಿ ಪಾರ್ಟಿಯ ಮಾಜಿ ಸಂಸದ ಧರ್ಮವೀರ್​ ಗಾಂಧಿ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜ್ಯೋತ್‌ ಸಿಂಗ್‌ ಸಿಧು ಬೆಬಲ ಸೂಚಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಧು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಫೀಮು ಸೇವನೆ ಮಾಡುತ್ತಿದ್ದ ನನ್ನ ಚಿಕ್ಕಪ್ಪ ಸುದೀರ್ಘಕಾಲ ಬಾಳಿದ್ದರು. ಅದು ಔಷಧಿಯಂತೆ ಅವರ ದೇಹದ ಮೇಲೆ ಕಾರ್ಯ ನಿರ್ವಹಿಸಿತ್ತು. ಹೀಗಾಗಿ ಅಫೀಮು ಬೆಳೆಯಲು ಕಾನೂನಿನಲ್ಲಿ ಅವಕಾಶ ನೀಡಬೇಕು ಎಂದಿದ್ದ ಗಾಂಧಿ ಅವರ ಮಾತಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ.
ಪಂಜಾಬ್‌ ಸಚಿವರಾಗಿರುವ ಸಿಧು, ಆಮ್ ಆದ್ಮಿ ಪಕ್ಷದ ಪಟಿಯಾಲಾದ ಆಪ್‌ ಸಂಸದ ನಾಯಕ ಧರಮ್‌ವೀರ್‌ ಗಾಂಧಿಗೆ ಬೆಂಬಲ ಸೂಚಿಸಿ ಈ ಮಾತನ್ನು ಆಡಿದ್ದರು.
ಮುಕ್ತಸರ್​ ಮಾರುಕಟ್ಟೆಯಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಧರಮ್‌ ವೀರ್‌ ಗಾಂಧಿ ಅಫೀಮು ಬೆಳೆಯುವುದನ್ನು,ಅದರ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಾನೂನಾತ್ಮಕ ಗೊಳಿಸಬೇಕು ಎಂದು ಆಗ್ರಹಿಸಿದ್ದರು. 
ಅದಕ್ಕೆ ಹಿಂದೆಯೂ ಅನೇಕ ಬಾರಿ ಈ ವಿಚಾರವಾಗಿ ವಾದಿಸಿದ್ದ ಗಾಂಧಿ ಹಿಂದೊಮ್ಮೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರನ್ನು ಭೇಟಿಯಾಗಿ ಈ ವಿಚಾರಕ್ಕೆ ಮನವಿ ಸಲ್ಲಿಸಿದ್ದರು.2016ರಲ್ಲಿ ಲೋಕಸಭೆಯಲ್ಲಿ ಸಹ ಅಫೀಮು ಕಾನೂನುಬದ್ದ ಮಾರಾಟ ಸಂಬಂಧ ಖಾಸಗಿ ಮಸೂದೆಯನ್ನು ಮಂಡನೆ ಮಾಡಿದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

SCROLL FOR NEXT