ನವಜ್ಯೋತ್‌ ಸಿಂಗ್‌ ಸಿಧು 
ದೇಶ

ಹೆರಾಯಿನ್​ಗಿಂತ ಗಸಗಸೆ ಉತ್ತಮ, ಅಫೀಮನ್ನು ಕಾನೂನುಬದ್ದಗೊಳಿಸಬೇಕು: ಸಿಧು

ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು

ಅಮೃತಸರ್: ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಆಮ್​ ಆದ್ಮಿ ಪಾರ್ಟಿಯ ಮಾಜಿ ಸಂಸದ ಧರ್ಮವೀರ್​ ಗಾಂಧಿ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜ್ಯೋತ್‌ ಸಿಂಗ್‌ ಸಿಧು ಬೆಬಲ ಸೂಚಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಧು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಫೀಮು ಸೇವನೆ ಮಾಡುತ್ತಿದ್ದ ನನ್ನ ಚಿಕ್ಕಪ್ಪ ಸುದೀರ್ಘಕಾಲ ಬಾಳಿದ್ದರು. ಅದು ಔಷಧಿಯಂತೆ ಅವರ ದೇಹದ ಮೇಲೆ ಕಾರ್ಯ ನಿರ್ವಹಿಸಿತ್ತು. ಹೀಗಾಗಿ ಅಫೀಮು ಬೆಳೆಯಲು ಕಾನೂನಿನಲ್ಲಿ ಅವಕಾಶ ನೀಡಬೇಕು ಎಂದಿದ್ದ ಗಾಂಧಿ ಅವರ ಮಾತಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ.
ಪಂಜಾಬ್‌ ಸಚಿವರಾಗಿರುವ ಸಿಧು, ಆಮ್ ಆದ್ಮಿ ಪಕ್ಷದ ಪಟಿಯಾಲಾದ ಆಪ್‌ ಸಂಸದ ನಾಯಕ ಧರಮ್‌ವೀರ್‌ ಗಾಂಧಿಗೆ ಬೆಂಬಲ ಸೂಚಿಸಿ ಈ ಮಾತನ್ನು ಆಡಿದ್ದರು.
ಮುಕ್ತಸರ್​ ಮಾರುಕಟ್ಟೆಯಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಧರಮ್‌ ವೀರ್‌ ಗಾಂಧಿ ಅಫೀಮು ಬೆಳೆಯುವುದನ್ನು,ಅದರ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಾನೂನಾತ್ಮಕ ಗೊಳಿಸಬೇಕು ಎಂದು ಆಗ್ರಹಿಸಿದ್ದರು. 
ಅದಕ್ಕೆ ಹಿಂದೆಯೂ ಅನೇಕ ಬಾರಿ ಈ ವಿಚಾರವಾಗಿ ವಾದಿಸಿದ್ದ ಗಾಂಧಿ ಹಿಂದೊಮ್ಮೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರನ್ನು ಭೇಟಿಯಾಗಿ ಈ ವಿಚಾರಕ್ಕೆ ಮನವಿ ಸಲ್ಲಿಸಿದ್ದರು.2016ರಲ್ಲಿ ಲೋಕಸಭೆಯಲ್ಲಿ ಸಹ ಅಫೀಮು ಕಾನೂನುಬದ್ದ ಮಾರಾಟ ಸಂಬಂಧ ಖಾಸಗಿ ಮಸೂದೆಯನ್ನು ಮಂಡನೆ ಮಾಡಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT