ಬಿಜನೋರ್: ಡಾಕ್ಟರ್ ಗಂಡನನ್ನು ಬಿಟ್ಟು ಡ್ರೈವರ್ ಜೊತೆ ಓಡಿ ಹೋಗಿ ಮದುವೆಯಾಗಿದ್ದ ಮಹಿಳೆಯನ್ನು ಎರಡನೇ ಗಂಡನೇ ಚಿನ್ನ ಹಾಗೂ ಹಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
32 ವರ್ಷದ ಮಹಿಳೆಯ ಮೃತದೇಹ ಎರಡು ವಾರಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಕೊಲೆಯ ಜಾಡನ್ನು ಹಿಡಿದಿದ್ದಾರೆ.
ಮೃತ ಮಹಿಳೆಯನ್ನು ರಶ್ಮಿ ಅಲಿಯಾಸ್ ರೇಷ್ಮಾ ಎಂದು ಗುರುತಿಸಲಾಗಿದ್ದು ರಶ್ಮಿ 2016ರಲ್ಲಿ ಡಾಕ್ಟರ್ ಗಂಡನನ್ನು ಬಿಟ್ಟು ಡೈವರ್ ಶಹನವಾಜ್ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ನಂತರ ಶಹನವಾಜ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಇದರಿಂದಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಮಾರಿದ್ದ. ಇದನ್ನು ರಶ್ಮಿ ಪ್ರಶ್ನಿಸಿದಾಗ ಆಕೆಯನ್ನು ತಂದೆ ಜೊತೆ ಸೇರಿಕೊಂಡು ಶಹನವಾಜ್ ಕೊಲೆ ಮಾಡಿದ್ದ.
ಡಾಕ್ಟರ್ ಆಗಿದ್ದ ಅನುರಾಗ್ ಜಾ ಮತ್ತು ರಶ್ಮಿ ಶಹನವಾಜ್ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದರು. ಇದಾದ ಒಂದು ತಿಂಗಳ ಬಳಿಕ ಶಹನವಾಜ್ ಡಾಕ್ಟರ್ ಕೆಲಸಕ್ಕೆ ತೆರಳಿದ ನಂತರ ಬಂದು ಭೇಟಿಯಾಗುತ್ತಿದ್ದ. ಈ ಭೇಟಿ ನಂತರ ಅನೈತಿಕ ಸಂಬಂಧಕ್ಕೆ ಕಾರಣವಾಗಿದೆ. ಇದಾದ ಬಳಿಕ ರಶ್ಮಿ ಶಹನವಾಜ್ ಜೊತೆ ಓಡಿ ಹೋಗಿದ್ದಳು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos