ಸಂಗ್ರಹ ಚಿತ್ರ 
ದೇಶ

ನಾಯಿಗೆ ಕ್ಷಮೆ ಕೇಳದಕ್ಕೆ ಚೂರಿಯಿಂದ ಆರು ಬಾರಿ ಇರಿದು ಕೊಂದ ನೆರೆಮನೆಯವರು!

ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು...

ನವದೆಹಲಿ: ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು ಆತನಿಗೆ ಚೂರಿ ಇರಿದು ಕೊಲೆ ಮಾಡಿದ್ದಾರೆ. 
ನವದೆಹಲಿಯಲ್ಲಿ ಈ ಘಟನೆ ನಡೆಸಿದ್ದು ವಿಜೇಂದ್ರ ರಾಣಾ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ವಿಜೇಂದ್ರ ಲಾರಿ ಚಾಲಕನಾಗಿದ್ದು ಮಧ್ಯರಾತ್ರಿ ಮನೆಗೆ ಬರುತ್ತಿದ್ದರು. ಈ ವೇಳೆ ಟಾಮಿ(ನಾಯಿ)ಯೊಂದಿಗೆ ಮೂವರು ಮಧ್ಯರಾತ್ರಿಯಲ್ಲಿ ತಿರುಗಾಡಲು ತೆರಳಿದ್ದಾರೆ. 
ವಿಜೇಂದ್ರ ರಾಣಾ ನಡೆದುಕೊಂಡು ಬರುತ್ತಿದ್ದುದ್ದನ್ನು ಕಂಡ ಟಾಮಿ ಬೊಗಳಲು ಶುರು ಮಾಡಿದೆ. ಈ ವೇಳೆ ರಾಣಾ ನಾಯಿಯನ್ನು ಬೈದು ಬೆದರಿಸಿ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮೂವರು ಬಂದು ನಾಯಿಗೆ ಕ್ಷಮೆ ಕೇಳುವಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ರಾಣಾ ವಿರೋಧಿಸಿದ್ದರಿಂದ ಮೂವರು ಸೇರಿ ರಾಣಾಗೆ ಚೂರಿಯಿಂದ ಆರು ಬಾರಿ ಇರಿದಿದ್ದಾರೆ. 
ಅಣ್ಣನ ಕೂಗಾಟವನ್ನು ಕೇಳಿ ಹೊರ ಬಂದ ಸಹೋದರ ಆತನ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿದ್ದರಿಂದ ರಾಣಾನನ್ನು ಕೂಡಲೇ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT