ಬಿಹಾರಿ ನೌಕರರ್ಯಾರು ಗುಜರಾತ್ ಬಿಡುತ್ತಿಲ್ಲ ಅವರು ಹೋಗ್ತಿರೋದು ಚಾತ್ ಪೂಜಾಗಾಗಿ: ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಯು-ಟರ್ನ್
ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಪರಿಣಾಮವಾಗಿ ಬಿಹಾರಿಗಳೂ ಸೇರಿದಂತೆ 20,000 ಉತ್ತರ ಭಾರತೀಯರು ಗುಜರಾತ್ ಬಿಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ವದಂತಿಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಬಿಹಾರಿ ನೌಕರರು ಯಾರೂ ಸಹ ಗುಜರಾತ್ ನ್ನು ತೊರೆಯುತ್ತಿಲ್ಲ ಬದಲಾಗಿ ಅವರು ಚಾತ್ ಪೂಜೆಗಾಗಿ ಅವರ ಸ್ಥಳಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವಲಸಿಗ ನೌಕರರ ಮೇಲೆ ಗುಜರಾತ್ ನಲ್ಲಿ ಹಲ್ಲೆ ನಡೆಯುತ್ತಿದೆ ಎಂಬ ಆರೋಪ ಮಾಡಿದ್ದ ಅಲ್ಪೇಶ್ ಠಾಕೂರ್ ಈಗ ಯು-ಟರ್ನ್ ತೆಗೆದುಕೊಂಡಿದ್ದು, ಆದರೆ ಆರೋಪಗಳನ್ನು ನಿರಾಕರಿಸಿದ್ದು, ಬಿಹಾರಿ ನೌಕರರು ಯಾರೂ ಗುಜರಾತ್ ಬಿಡುತ್ತಿಲ್ಲ, ಬದಲಾಗಿ ಅವರು ಚಾತ್ ಪೂಜೆಗಾಗಿ ಅವರ ಸ್ಥಳಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos