ಕೇರಳ ಪ್ರವಾಹದ ವೈಮಾನಿಕ ಸಮೀಕ್ಷೆ ಫೋಟೋ 
ದೇಶ

ಕೇರಳ ಮರು ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ ಅಗತ್ಯವಿದೆ: ವಿಶ್ವಸಂಸ್ಥೆ ಅಂಗ ವರದಿ

ಪ್ರವಾಹಪೀಡಿತ ಕೇರಳ ರಾಜ್ಯದ ಪುನರ್ ನಿರ್ಮಾಣಕ್ಕೆ ಸುಮಾರು 27 ಸಾವಿರ ಕೋಟಿ ...

ತಿರುವನಂತಪುರ: ಪ್ರವಾಹಪೀಡಿತ ಕೇರಳ ರಾಜ್ಯದ ಪುನರ್ ನಿರ್ಮಾಣಕ್ಕೆ ಸುಮಾರು 27 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು ಎಂದು 11 ವಿಶ್ವಸಂಸ್ಥೆ ಅಂಗಗಳೊಂದಿಗೆ ವಿಪತ್ತು ಪೂರ್ವ ಅಗತ್ಯ ಮೌಲ್ಯಮಾಪನ (ಪಿಡಿಎನ್ಎ) ಕರಡು ವರದಿ ತಿಳಿಸಿದೆ. ಇಂತಹ ವರದಿಯನ್ನು ಪಿಡಿಎನ್ಎ ಭಾರತದಲ್ಲಿ ತಯಾರಿಸುತ್ತಿರುವುದು ಇದೇ ಮೊದಲು.

ಈ ವರದಿಯನ್ನು ವಿಶ್ವಸಂಸ್ಥೆ ತಂಡ ರಾಜ್ಯ ಮುಖ್ಯ ಕಾರ್ಯದರ್ಶಿ ಟಾಮ್ ಜೊಸ್, ವಿಶ್ವಸಂಸ್ಥೆಯ ಸ್ಥಳೀಯ ಸಹಯೋಜಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಮುಖ್ಯಸ್ಥ ಡಾ ಹೆಂಕ್ ಬೆಕೆಡಮ್ ಮತ್ತು ವೆಂಕಟೇಶಪತಿ ಐಎಎಸ್, ಪಿಡಿಎನ್ಎ ರಾಜ್ಯ ಸಂಯೋಜಕ ಮತ್ತು ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಅವರಿಗೆ ಸಲ್ಲಿಸಿದೆ. ಪ್ರವಾಹ ಪೀಡಿತ ಕೇರಳ ರಸ್ತೆಗಳ ಮರು ನಿರ್ಮಾಣಕ್ಕೆ 8,554 ಕೋಟಿ ರೂಪಾಯಿ, ವಸತಿ ನಿರ್ಮಾಣಕ್ಕೆ 5,659 ಕೋಟಿ, ಕೃಷಿ, ಮೀನುಗಾರಿಕೆ ಮತ್ತು ಜಾನುವಾರಗಳ ಮೇವು ಇತ್ಯಾದಿಗೆ 4,499 ಕೋಟಿ ರೂಪಾಯಿ, ಜನಜೀವನಕ್ಕೆ 3,903 ಕೋಟಿ ರೂ, ನೀರಾವರಿಗೆ 1,484 ಕೋಟಿ ರೂ. ನೀರು ಮತ್ತು ಸ್ವಚ್ಛತೆಗೆ 1,331 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ವರದಿಯಲ್ಲಿ ವಿವರಿಸಿದೆ.

ಹಸಿರು ರಾಜ್ಯ: ವರದಿಯಲ್ಲಿ ಕೇರಳವನ್ನು ಮೊದಲ ಹಸಿರು ರಾಜ್ಯವನ್ನಾಗಿ ಮಾಡಬೇಕೆಂದು ಸೂಚಿಸಲಾಗಿದೆ. ಕೇರಳ ರಾಜ್ಯವನ್ನು ಈ ಹಿಂದಿನಂತೆ ಮಾಡಲು ಹಲವು ಆಲೋಚನೆಗಳು, ಅಭಿಪ್ರಾಯಗಳನ್ನು ನೀಡಲಾಗಿದೆ. ಅದಕ್ಕಾಗಿ ಸುಮಾರು 12 ಲಕ್ಷ ಮನೆಗಳು ಮತ್ತು ಫ್ಲಾಟ್ ಗಳಿಗೆ ಪ್ರತ್ಯೇಕ ತೆರಿಗೆ ದರವನ್ನು ವಿಧಿಸಬೇಕೆಂದು ಸೂಚಿಸಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, ಜಗತ್ತಿನಲ್ಲಿ ಮುಂದುವರಿದ ದೇಶಗಳಲ್ಲಿ ಈ ತೆರಿಗೆ ವ್ಯವಸ್ಥೆಯಿದ್ದು ಮನೆಗಳು ಮತ್ತು ಫ್ಲಾಟ್ ಗಳಿಗೆ ತೆರಿಗೆ ದರ ಹೆಚ್ಚಿಸಿದರೆ ಕಡಿಮ ಬಾಡಿಗೆ ನೀಡಲಾಗುತ್ತದೆ. ಅಂದರೆ ದೇಶದ ಆರ್ಥಿಕತೆಗೆ ಹಣ ವಿನಿಯೋಗವಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!