ಉಷಾ ಠಾಕೂರ್ 
ದೇಶ

#MeToo: ವೈಯುಕ್ತಿಕ ಲಾಭಕ್ಕಾಗಿ ಮಹಿಳೆಯರು ರಾಜಿ ಮಾಡಿಕೊಳ್ಳುತ್ತಿದ್ದಾರೆ: ಮ. ಪ್ರದೇಶ ಬಿಜೆಪಿ ಶಾಸಕಿ

ನೈತಿಕ ಮೌಲ್ಯಗಳ" ಜೊತೆ ರಾಜಿ ಮಾಡಿಕೊಳ್ಳುವುದರಿಂದಾಗಿ ಲೈಂಗಿಕ ಕಿರುಕುಳದಂತಹಾ ಸಮಸ್ಯೆಗಳು ಉಂಟಾಗುತ್ತದೆ ಎಂದು ಮಧ್ಯ ಪ್ರದೇಶದ ಬಿಜೆಪಿ ಉಪಾಧ್ಯಕ್ಷೆ ಉಷಾ ಠಾಕೂರ್ ಹೇಳಿದ್ದಾರೆ.

ಇಂದೋರ್ (ಮಧ್ಯ ಪ್ರದೇಶ): ನೈತಿಕ ಮೌಲ್ಯಗಳ" ಜೊತೆ ರಾಜಿ ಮಾಡಿಕೊಳ್ಳುವುದರಿಂದಾಗಿ ಲೈಂಗಿಕ ಕಿರುಕುಳದಂತಹಾ ಸಮಸ್ಯೆಗಳು ಉಂಟಾಗುತ್ತದೆ ಎಂದು ಮಧ್ಯ ಪ್ರದೇಶದ ಬಿಜೆಪಿ ಉಪಾಧ್ಯಕ್ಷೆ ಉಷಾ ಠಾಕೂರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಕಾಂಗ್ರೆಸ್ ಬಿಜೆಪಿ ನಾಯಕಿ ಠಾಕೂರ್ ಹೇಳಿಕೆ  ಆಡಳಿತ ಪಕ್ಷದ "ವಿರೋಧಿ ಚಿಂತನೆ"ಯ ಉದಾಹರಣೆಯಾಗಿದೆ. ಎಂದು ಟೀಕಿಸಿದೆ.
ಇದಕ್ಕೆ ಮುನ್ನ ಠಾಕೂರ್ "ಮೀಟೂ" ಅಭಿಯಾನದ ಕುರಿತು ವರದಿಗಾರರ ಪ್ರಶ್ನೆಗೆ ಠಾಕೂರ್ ಉತ್ತರಿಸಿದ್ದರು.
"ವೈಯಕ್ತಿಕ ಲಾಭಕ್ಕಾಗಿ ನಾವು ನೈತಿಕ ಮೌಲ್ಯಗಳು ಮತ್ತು ಸಿದ್ಧಾಂತಗಳೊಂದಿಗೆ ನಾವು ರಾಜಿ ಮಾಡಿಕೊಳ್ಳುವ ಕಾರಣ ಇಂತಹಾ ಸಮಸ್ಯೆ ಉದ್ಭವಿಸುತ್ತದೆ.ಇದು ನನ್ನ ಸ್ಪಷ್ಟವಾದ ಕಲ್ಪನೆಯಾಗಿದೆ"
"ಎಲ್ಲ ಮಹಿಳೆಯರೂ ಮತ್ತು ತನ್ನೆಲ್ಲಾ ಸಹೋದರರ ಕುರಿತು ನಾನು ಕೇಳುವುದೆಂದರೆ ಎಂದಿಗೂ ನಮ್ಮ ಒಳಿತಿಗಾಗಿ ಸಣ್ಣ ಮಾರ್ಗಗಳನ್ನು ಅನುಸರಿಸಬಾರದು.ನೈತಿಕತೆ ಹಾಗೂ ಜೀವನ ಮೌಲ್ಯಗಳ ಕುರಿತು ರಾಜಿ ಮಾಡಿಕೊಳ್ಳುವುದು ಅತಿ ಕೆಟ್ಟದಾಗಿದ್ದು ಹೀಗೆ ರಾಜಿಯಾಗುವ ಮೂಲಕ ಯಶಸ್ಸು ಸಾಧಿಸುವುದು ಭಾರತೀಯ ಸಂಸ್ಕೃತಿಯಲ್ಲ" ಅವರು ಹೇಳಿದರು.
ಠಾಕೂರ್ ಮಾತಿಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ಮಾದ್ಯಮ ಸೆಲ್ ಅಧ್ಯಕ್ಷೆ ಶೋಭಾ ಓಝಾ ಬಿಜೆಪಿ ನಾಯಕಿಯ ಹೇಳಿಕೆ ಆಡಳಿತಾರೂಢ ಪಕ್ಷದ ಮಹಿಳಾ ವಿರೋಧಿ ಚಿಂತನೆಯನ್ನು ತೋರಿಸಿದೆ ಎಂದಿದ್ದಾರೆ.
"ಇಂತಹ ಚಿಂತನೆಯಿಂದಾಗಿ ಮಹಿಳೆಯರು ಮತ್ತು ಯುವತಿಯರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕಾಗಿ (ಮಹಿಳಾ ವಿರೋಧಿ ವರ್ತನೆ) ಬಿಜೆಪಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರನ್ನು ಲೈಂಗಿಕ ಕಿರುಕುಳದ ಗಂಭೀರ ಆರೋಪದಿಂದ ರಕ್ಷಿಸಲು ಪ್ರಯತ್ನ ನಡೆದಿದೆ" ಓಜಾ ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT