ಸಂಗ್ರಹ ಚಿತ್ರ 
ದೇಶ

ವಿಮಾನ ಮಾರಾಟಕ್ಕಾಗಿ ರಿಲಯನ್ಸ್ ಜೊತೆ ಒಪ್ಪಂದ ಅನಿವಾರ್ಯವಾಗಿತ್ತು: ಡಸ್ಸಾಲ್ಟ್

ರಾಫೆಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಗೆ ನಾವು ಪಾಲುದಾರಿಕೆ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿಕೊಂಡಿದೆ ಎಂದು ಪ್ರೆಂಚ್ ಮೂಲದ ವೆಬ್ ಸೈಟ್ ವೊಂದು ವರದಿ ಮಾಡಿದೆ.

ನವದೆಹಲಿ: ರಾಫೆಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಗೆ ನಾವು ಪಾಲುದಾರಿಕೆ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿಕೊಂಡಿದೆ ಎಂದು ಪ್ರೆಂಚ್ ಮೂಲದ ವೆಬ್ ಸೈಟ್ ವೊಂದು ವರದಿ ಮಾಡಿದೆ.
ಈ ಬಗ್ಗೆ ಡಸ್ಸಾಲ್ಟ್ ಸಂಸ್ಥೆ ಆಂತರಿಕ ದಾಖಲೆಗಳನ್ನು ಬಹಿರಂಗಗೊಳಿಸಿರುವ ವೆಬ್ ಸೈಟ್ ಡಸ್ಸಾಲ್ಟ್ ಸಂಸ್ಥೆ ತನ್ನ ಕಾರ್ಮಿಕರಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದೆ ಎಂದು ವರದಿ ಮಾಡಿದೆ. ಡಸ್ಸಾಲ್ಟ್ ಏವಿಯೇಷನ್ ನ ಎರಡು ಕಾರ್ಮಿಕ ಸಂಘಟನೆಗಳಾದ ಸಿಜಿಟಿ ಮತ್ತು ಸಿಎಫ್ ಡಿಟಿಗಳು ಸದಸ್ಯರಿಗಾಗಿ ಬಿಡುಗಡೆ ಮಾಡಿರುವ ಪ್ರಕಟಣೆಗಳಲ್ಲಿ ಈ ಮಾಹಿತಿ ಇದೆ ಎಂದು ವೆಬ್ ಸೈಟ್ ವರದಿ ಮಾಡಿದೆ. ಅಂತೆಯೇ ಅವನ್ನು ಫ್ರಾನ್ಸ್‌ನ ‘ಪೋರ್ಟಲ್ ಏವಿಯೇಷನ್’ ಎಂಬ ಬ್ಲಾಗ್ ಪ್ರಕಟಿಸಿದೆ ಎನ್ನಲಾಗಿದೆ. 
'ನಾವು ಈ ಪ್ರಕಟಣೆಗಳನ್ನು ಅರ್ಥೈಸಲು ಹೋಗುವುದಿಲ್ಲ. ಬದಲಿಗೆ ನೀವೇ ಅದನ್ನು ಓದಿ ಅರ್ಥಮಾಡಿಕೊಳ್ಳಿ' ಎಂದು ಪೋರ್ಟಲ್ ಏವಿಯೇಷನ್ ತನ್ನ ವರದಿಯಲ್ಲಿ ಸೂಚಿಸಿದೆ. ರಾಫೆಲ್ ಒಪ್ಪಂದದಲ್ಲಿ ಡಸ್ಸಾಲ್ಟ್ ಕಂಪನಿಯು ರಿಲಯನ್ಸ್ ಡಿಫೆನ್ಸ್ ಜತೆಗೆ ಪಾಲುದಾರಿಕೆ ಮಾಡಿಕೊಂಡ ಬಗ್ಗೆ ಕಂಪನಿಯ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿದೇಶಿ ಪಾಲುದಾರಿಕೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲು ಕಂಪನಿಯ ಉನ್ನತಾಧಿಕಾರಿ ಲೋಯಿಕ್ ಸೆಗಲೆನ್ ಅವರು 2017ರ ಮೇ 11ರಂದು ಕಾರ್ಮಿಕರಿಗೆ ನೀಡಿದ ಸಮಜಾಯಿಷಿಯ ವಿವರ ಈ ಪ್ರಕಟಣೆಗಳಲ್ಲಿ ಇದೆ ಎನ್ನಲಾಗಿದೆ.
ವಿಮಾನ ಮಾರಾಟಕ್ಕಾಗಿ ರಿಲಯನ್ಸ್ ಜೊತೆ ಒಪ್ಪಂದ ಅನಿವಾರ್ಯವಾಗಿತ್ತು
'ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ಅಭಿಯಾನದ ಅಡಿ 'ಡಸ್ಸಾಲ್ಟ್ ರಿಲಯನ್ಸ್ ಏರೊಸ್ಪೇಸ್' ಎಂಬ ಕಂಪನಿಯನ್ನು ಸ್ಥಾ‍ಪಿಸುವ ಪ್ರಸ್ತಾವವನ್ನು ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮುಂದೆ ಇಡಲಾಗಿತ್ತು. ಭಾರತಕ್ಕೆ ರಾಫೆಲ್ ಯುದ್ಧವಿಮಾನಗಳನ್ನು ರಫ್ತು ಮಾಡುವ ಒಪ್ಪಂದಕ್ಕೆ ಪ್ರತಿಫಲವಾಗಿ ನಾವು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯಿತ್ತು' ಎಂದು ಸಿಜಿಟಿ ಮತ್ತು ಸಿಎಫ್ ಡಿಟಿಯ ಪ್ರಕಟಣೆಯಲ್ಲಿ ವಿವರಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

SCROLL FOR NEXT