ಮೋಹನ್ ಭಾಗ್ವತ್ 
ದೇಶ

ಆತ್ಮಗೌರವಕ್ಕಾಗಿ ರಾಮ ಮಂದಿರ ನಿರ್ಮಾಣ ಅಗತ್ಯ, ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತನ್ನಿ: ಮೋಹನ್ ಭಾಗ್ವತ್

ರಾಮ ಮಂದಿರ ನಿರ್ಮಾಣದ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಮಾತನಾಡಿದ್ದು, ಆತ್ಮಗೌರವಕ್ಕಾಗಿ ರಾಮ ಮಂದಿರ ನಿರ್ಮಾಣವಾಗುವುದು ಅನಿವಾರ್ಯ

ನಾಗ್ಪುರ: ರಾಮ ಮಂದಿರ ನಿರ್ಮಾಣದ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಮಾತನಾಡಿದ್ದು, ಆತ್ಮಗೌರವಕ್ಕಾಗಿ ರಾಮ ಮಂದಿರ ನಿರ್ಮಾಣವಾಗುವುದು ಅನಿವಾರ್ಯ ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 
ರಾಮ ಮಂದಿರ ನಿರ್ಮಾಣ ದೇಶದ ಆತ್ಮಗೌರವಕ್ಕಾಗಿ ಅಗತ್ಯವಾಗಿದೆ. ಸೌಹಾರ್ದತೆ ಹಾಗೂ ಏಕತೆಗೆ ರಾಮ ಮಂದಿರ ದಾರಿ ಮಾಡಿಕೊಡಲಿದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.  ವಿಜಯದಶಮಿಯಂದು ನಾಗ್ಪುರದಲ್ಲಿ ಸಂದೇಶ ನೀಡಿರುವ ಮೋಹನ್ ಭಾಗ್ವತ್, ಮಾವೋವಾದಿಗಳು ಎಂದಿಗೂ ನಗರಗಳತ್ತಲೇ ಗಮನ ಹರಿಸುತ್ತಿದ್ದರು. ಅಂಧ ಅನುಯಾಯಿಗಳಿರುವ ದೇಶ ವಿರೋಧಿ ನಾಯಕತ್ವವನ್ನು ಸೃಷ್ಟಿಸುವುದೇ ನವ ಎಡಪಂಥದ ಉದ್ದೇಶವಾಗಿದೆ ಎಂದು ಮೋಹನ್ ಭಗವತ್ ಇದೇ ವೇಳೆ ಹೇಳಿದ್ದಾರೆ. 
ಸಮಾಜದಲ್ಲಿ ದ್ವೇಷ ಮೂಡಿಸುವುದೇ ನಗರ ಮಾವೋವಾದಿಗಳ ಉದ್ದೇಶವಾಗಿದೆ.  ದೇಶ ವಿರೋಧಿಗಳಿಂದ ಪ್ರೇರಣೆ ಪಡೆಯುವ ಮಾವೋವಾದಿಗಳು ತಾವು ಎಲ್ಲೇ ಹೋದರೂ ದೇಶಕ್ಕೆ ಅವಮಾನ ಮಾಡುತ್ತಾರೆ ಎಂದು ಮೋಹನ್ ಭಾಗ್ವತ್ ಆರೋಪ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT