ರಜನಿಕಾಂತ್ 
ದೇಶ

ರಜನಿಂಕಾತ್ 'ಸೂತ್ರದ ಬೊಂಬೆ': ಹಿರಿಯನ ನಟನ ವಿರುದ್ಧ ಡಿಎಂಕೆ ವಾಗ್ದಾಳಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ, ರಜನಿಂಕಾತ್ ಕೆಲವರ ಕೈಯಲ್ಲಿ...

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ, ರಜನಿಂಕಾತ್ ಕೆಲವರ ಕೈಯಲ್ಲಿ 'ಸೂತ್ರದ ಬೊಂಬೆ'ಯಾಗಿದ್ದು, ಕೋಮುವಾದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ರಜನಿಕಾಂತ್ ಅವರು ರಾಜಕೀಯ ಪಕ್ಷ ಆರಂಭಿಸುವ ಮುನ್ನ ರಜನಿ ಮಕ್ಕಳ್ ಮಂಡ್ರಮ್(ಆರ್ ಎಂಎಂ) ಎಂಬ ವೇದಿಕೆ ಆರಂಭಿಸಿದ್ದನ್ನು ಡಿಎಂಕೆ ತನ್ನ ಮುಖವಾಣಿ ಮುರಸೋಳಿಯಲ್ಲಿ ಪ್ರಶ್ನಿಸಿದೆ.
ರಾಜಕೀಯದಲ್ಲಿ ಹಣದ ಮತ್ತು ಹುದ್ದೆಯ ಮೋಹದಲ್ಲಿ ಬದಲಾವಣೆ ತರಲು ಉತ್ತೇಜನ ನೀಡಬೇಕು ಎಂದು ತಮ್ಮ ಆರ್ ಎಂಎಂ ಸದಸ್ಯರಿಗೆ ಹೇಳಿದ್ದರು. ಅಲ್ಲದೆ ತಮ್ಮ ರಾಜಕೀಯದಲ್ಲಿ ಹಣ ಮತ್ತು ಹುದ್ದೆಗೆ ಮಹತ್ವ ನೀಡುವುದಿಲ್ಲ ಎಂದು ತಿಳಿಸಿದ್ದರು.
ರಜನಿಕಾಂತ್ ಅವರು ಮುಗ್ದ ಅಭಿಮಾನಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ನಟ ರಜನಿಕಾಂತ್ ಅವರಿಗೆ ನಿಜಕ್ಕೂ ಹುದ್ದೆಯ ಮೋಹ ಇಲ್ಲದಿದ್ದರೆ ರಾಷ್ಟ್ರೀಯವಾದಿ ಇವಿ ರಾಮಸ್ವಾಮಿ ಪೆರಿಯಾರ್ ರೀತಿಯ ಚಳವಳಿ ಆರಂಭಿಸಬೇಕಿತ್ತು. ರಾಜಕೀಯ ಪಕ್ಷ ಘೋಷಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು ಏಕೆ? ಎಂದು ಡಿಎಂಕೆ ಪ್ರಶ್ನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT